ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ತಾಲೂಕಿನ ತಿಮ್ಲಾಪುರ ಕ್ಯಾಂಪ್’ನಲ್ಲಿ ದುಷ್ಕರ್ಮಿಗಳು ಬುಧವಾರ ಬೆಳಗಿನ ಜಾವ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ತಿಮ್ಲಪುರ ಕ್ಯಾಂಪ್ ನಿವಾಸಿ ಸಾಧಿಕ್(32) ಎಂಬುವವರಿಗೆ ಸೇರಿದ್ದ CHEVROLET-BEAT ಕಾರಿಗೆ ಬೆಂಕಿ ಹಚ್ಚಲಾಗಿದೆ. ಕಾರಿನ ಮುಂದಿನ ಟೈರ್, ಎಂಜಿನ್’ನ ಒಳಭಾಗದ ವೈರಿಂಗ್ ಸುಟ್ಟು ಹೋಗಿರುತ್ತದೆ.
ಕೃತ್ಯವನ್ನು ಅದೇ ಗ್ರಾಮದ ನಿವಾಸಿಗಳಾದ ಅಲೀಮ್ ಪಾಶಾ ಮತ್ತು ತೌಫಿಕ್ ಎಸಗಿರುವ ಬಗ್ಗೆ ಸಂಶಯವಿದೆ ಎಂದು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.