ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಗಾಡಿಕೊಪ್ಪದಲ್ಲಿ ಬಾಟಲಿ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.
READ | ದೆಹಲಿಯ ತಿರಂಗ ಬೈಕ್ ರ್ಯಾಲಿಯಲ್ಲಿ ಮಿಂಚಿದ ಬಿ.ವೈ.ಆರ್
ಹೊಸಮನೆಯ ಕಿರಣ್ ಅಲಿಯಾಸ್ ಪೂಚಿ ಕಿರಣ್(23) ಕೊಲೆಯಾದ ಯುವಕ. ಸ್ನೇಹಿತರೊಂದಿಗೆ ಮದ್ಯ ಸೇವಿಸಿದ ಬಳಿಕ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಕಿರಣ್ ತಲೆಗೆ ಬಲವಾದ ಪ್ರಹಾರ ಮಾಡಿ ಕೊಲೆ ಮಾಡಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.