ಸುದ್ದಿ ಕಣಜ.ಕಾಂ | TALUK | RIANFALL
ಭದ್ರಾವತಿ: ಧಾರಾಕಾರ ಮಳೆಗೆ ಬದುಕೇ ಕೊಚ್ಚಿ ಹೋಗಿದ್ದು, ಜೀವನ ಕಂಡುಕೊಳ್ಳುವುದಕ್ಕೆಂದು ಕಾಳಜಿ ಕೇಂದ್ರದಲ್ಲಿದ್ದರೆ ಅಂತಹವರ ಮನೆಗಳಲ್ಲಿ ಕಳ್ಳತನದಂತಹ ಹೇಯ ಕೃತ್ಯ ಎಸಗಲಾಗಿದೆ.
READ | ಶಿವಮೊಗ್ಗದಲ್ಲಿ ಮಳೆ ಆವಾಂತರ, ಮನೆ ಕುಸಿತ, ರಸ್ತೆ ಸಂಪರ್ಕ ಕಡಿತ ಸಾಧ್ಯತೆ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಕವಲಗುಂದಿ ಬಿಸಿಎಂ ಹಾಸ್ಟೆಲ್’ನಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಇದೇ ಸಮಯ ಸಾಧಿಸಿದ ಕಳ್ಳರು ರಾತ್ರಿ ಹೊತ್ತಿನಲ್ಲಿ ಬಂದು ಕಳ್ಳತನ ಮಾಡಿದ್ದಾರೆ.
ಕೋಳಿ, ಚಿನ್ನದ ಆಭರಣ ಕಳವು
ವಯೋವೃದ್ಧೆ ಜಯಮ್ಮ ಎಂಬುವವರ ಮನೆಯಲ್ಲಿ ಐದು ಕೋಳಿಗಳನ್ನು ಕಳ್ಳತನ ಮಾಡಲಾಗಿದೆ. ಜತೆಗೆ, ಚಿನ್ನದ ಕಿವಿಯೋಲೆ, ಉಂಗುರು, ನಾಲ್ಕು ಚೀಲಗಳಲ್ಲಿದ್ದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ದೂರು ಸಹ ದಾಖಲಾಗಿಲ್ಲ.