ಸುದ್ದಿ ಕಣಜ.ಕಾಂ | DISTRICT | BHADRAVATHI BRIDGE
ಭದ್ರಾವತಿ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ, 33,175 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ. ಪರಿಣಾಮ ನದಿ ಉಕ್ಕಿ ಹರಿಯುತಿದ್ದು, ಹೊಸ ಸೇತುವೆ ಮುಳುಗಡೆಯಾಗಿದೆ.
ನದಿ ಕೂಡ ಮೈದುಂಬಿ ಹರಿಯುತಿದ್ದು, ನಿರಾಶ್ರಿತರಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ.
READ | ಲಿಂಗನಮಕ್ಕಿ ಜಲಾಶಯ ನೀರು ಹೊರಬಿಡುವ ಬಗ್ಗೆ ಮೊದಲ ಎಚ್ಚರಿಕೆ
ಜಿಲ್ಲೆಯಲ್ಲಿ 132 ಮನೆಗಳಿಗೆ ನುಗ್ಗಿದ ನೀರು
ಜಿಲ್ಲೆಯ ನಾನಾ ಭಾಗಗಳಲ್ಲಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ವರ್ಷಧಾರೆ ಮುಂದುವರಿದಿದ್ದು, 132 ಮನೆಗಳಿಗೆ ನೀರು ನುಗ್ಗಿದೆ. 16 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 97 ಮನೆಗಳಿಗೆ ಹಾನಿಯಾಗಿದೆ. 266 ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ.