ಸುದ್ದಿ ಕಣಜ.ಕಾಂ | DISTRICT | 04 SEP 2022
ಶಿವಮೊಗ್ಗ: ಕರ್ತವ್ಯ ಪ್ರಜ್ಞೆ ಮೆರೆದ ಕಾನ್ಸ್ಟೇಬಲ್ ಗಳಿಗೆ ಪೊಲೀಸ್ ಇಲಾಖೆಯಿಂದ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ.
READ | ಶಿವಮೊಗ್ಗದಲ್ಲಿ ಶಾಂತಿ ಕದಡಿದರೆ ತರಳಬಾಳು ಶ್ರೀ ಸತ್ಯಾಗ್ರಹದ ಎಚ್ಚರಿಕೆ, ಹೇಗಿತ್ತು ‘ನಮ್ಮ ನಡೆ ಶಾಂತಿಯ ಕಡೆಗೆ’?
ಜೀವ ಉಳಿಸಿದ್ದಕ್ಕೆ ಶಹಭಾಷ್’ಗಿರಿ
ಹೊಸನಗರದಲ್ಲಿ ವ್ಯಕ್ತಿಯೊಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ಬಗ್ಗೆ ಇಆರ್.ಎಸ್.ಎಸ್ 112ಗೆ ಕರೆಬಂದಿದ್ದೇ ಸಿಬ್ಬಂದಿ ಪ್ರಜ್ವಲ್, ಹನೀಫ್ ಮತ್ತು ಸತೀಶ್ ಅವರು ತಕ್ಷಣ ಕರೆಗೆ ಸ್ಪಂದಿಸಿ, ಜೀವ ಉಳಿಸಿ ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ. ಈ ಕಾರಣಕ್ಕೆ ಪ್ರಶಂಸೆಯ ಪತ್ರ ನೀಡಿ ಗೌರವಿಸಲಾಗಿದೆ.
ಬಾಲ್ಯವಿವಾಹ ತಡೆದ ಸಿಬ್ಬಂದಿ
ಭದ್ರಾವತಿಯಲ್ಲಿ ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ 112ಗೆ ಕರೆಬಂದ ಮೇರೆಗೆ, ಕರ್ತವ್ಯದಲ್ಲಿದ್ದ ರವಿಕುಮಾರ್, ಮಂಜುನಾಥ್ ಮತ್ತು ಹರೀಶ್ ಕುಮಾರ್ ಅವರು ತಕ್ಷಣ ಕರೆಗೆ ಸ್ಪಂದಿಸಿ, ಬಾಲ್ಯ ವಿವಾಹವನ್ನು ತಡೆದು ಉತ್ತಮ ಕರ್ತವ್ಯ ನಿರ್ವಹಿಸಿದ್ದರಿಂದ ಪ್ರಶಂಸೆ ಪತ್ರ ನೀಡಿ ಗೌರವಿಸಿದ್ದಾರೆ.