ಸುದ್ದಿ ಕಣಜ.ಕಾಂ | DISTRICT | 05 SEP 2022
ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ದಿಂದ ವಿತರಿಸಲಾಗುತ್ತಿರುವ ರಿಯಾಯಿತಿ ಪಾಸ್ (Bus pass) ಆಧಾರಿತ ಪ್ರಯಾಣದ ಅವಧಿಯನ್ನು ಆಗಸ್ಟ್ 22 ರಿಂದ ಅಕ್ಟೋಬರ್ 22 ರ ಅಂತ್ಯದವರೆಗೆ ವಿಸ್ತರಿಸಲಾಗಿದ್ದು, ವಿದ್ಯಾರ್ಥಿಗಳಿಂದ ನಿಗದಿತ ಮೊತ್ತ ಪಡೆದು ರಶೀದಿ ನೀಡಿ ವಿದ್ಯಾರ್ಥಿಗಳು ರಶೀದಿ ಮತ್ತು ಹಳೆಯ ಪಾಸ್ ಎರಡನ್ನು ತೋರಿಸಿ ಅಕ್ಟೋಬರ್-22ರ ವರೆಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಅಂತಿಮ ವರ್ಷದ ಕೊನೆಯ ಸೆಮಿಸ್ಟರ್ ನಲ್ಲಿ ಅಭ್ಯಸಿಸುತ್ತಿರುವ ಪದವಿ/ ಸ್ನಾತಕೋತ್ತರ/ ಡಿಪ್ಲೊಮಾ/ ಕಾನೂನು ಇತರೆ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ಪರೀಕ್ಷೆ ಮುಗಿಯುವವರಿಗೆ ಮಾತ್ರ ಅಂದರೆ ಅಕ್ಟೋಬರ್ 22ರ ಅಂತ್ಯದವರೆಗೆ ಹಳೆಯ ಪಾಸ್ ಹಾಗೂ ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಶೀದಿಯನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ.
READ | ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ರಚ್ಚೆ ಹಿಡಿದ ಮಳೆ, ಮೋಡ ಕವಿದ ವಾತಾವರಣ
ಇನ್ನುಳಿದ ಇತರೆ ತರಗತಿ/ ಸೆಮಿಸ್ಟರ್ ವಿದ್ಯಾರ್ಥಿಗಳು ಸೇವಾಸಿಂಧು ಪೊರ್ಟಲ್ನಲ್ಲಿ ಅರ್ಜಿ ಸಲ್ಲಿಸಿ ಹೊಸ ಪಾಸ್’ಗಳನ್ನು ಶಿವಮೊಗ್ಗ ವಿಭಾಗದ ಬಸ್ ನಿಲ್ದಾಣಗಳ ಬಸ್ ಪಾಸ್ ವಿತರಣಾ ಕೌಂಟರ್ ಗಳಲ್ಲಿ ಪಡೆಯಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
https://suddikanaja.com/2022/03/25/karntaka-government-has-given-time-to-pass-the-computer-literacy-test-for-benefit-of-the-employees/