ಸುದ್ದಿ ಕಣಜ.ಕಾಂ | DISTRICT | 22 SEP 2022
ಶಿವಮೊಗ್ಗ: ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಶಿವಮೊಗ್ಗ ಕಡೆಗೆ ಇಡೀ ರಾಷ್ಟ್ರ ದೃಷ್ಟಿನೆಟ್ಟಿದೆ. ಸೆಪ್ಟೆಂಬರ್ 19ರಂದು ಇಬ್ಬರನ್ನು ವಶಕ್ಕೆ ಪಡೆದ ಬಳಿಕ ತನಿಖೆಯೂ ಚುರುಕುಗೊಂಡಿದೆ.
READ | ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಎನ್.ಐ.ಎ ತಂಡ ದಾಳಿ, ಒಬ್ಬ ವಶಕ್ಕೆ
- ಆಗಸ್ಟ್ 15ರಂದು ಪ್ರೇಮ್ ಸಿಂಗ್ ಪ್ರಕರಣದ ಆರೋಪಿಯ ವಿಚಾರ ವೇಳೆ ಉಗ್ರರ ಕುರಿತು ಮಾಹಿತಿ ಲಭ್ಯ, ತಕ್ಷಣ ಕಾರ್ಯಪ್ರವೃತ್ತರಾದ ಶಿವಮೊಗ್ಗ ಪೊಲೀಸ್
- ಸೆಪ್ಟೆಂಬರ್ 19ರಂದು ಶಂಕಿತ ಉಗ್ರರು ಎನ್ನಲಾದ ಸಿದ್ದೇಶ್ವರ ನಗರದ ನಿವಾಸಿ ಸೈಯದ್ ಯಾಸೀನ್ ಅಲಿಯಾಸ್ ಬೈಲ್(21), ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್(22) ಬಂಧನ.
- ನಿಷೇಧಿತ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಜೊತೆಗೆ ನಂಟು ಹೊಂದಿರುವ ಶಂಕೆ ಹಿನ್ನೆಲೆ ಆರೋಪಿಗಳ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ (ನಿರ್ಬಂಧ) ತಿದ್ದುಪಡಿ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲು
- ಶಂಕಿತ ಉಗ್ರರನ್ನು ಶಿವಮೊಗ್ಗದ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಪೊಲೀಸರು. ವಿಚಾರಣೆಗೋಸ್ಕರ ಸೆಪ್ಟೆಂಬರ್ 29ರ ವರೆಗೆ ಇಬ್ಬರೂ ಪೊಲೀಸ್ ಕಸ್ಟಡಿಗೆ
- ಶಿವಮೊಗ್ಗಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ (ಎಫ್.ಎಸ್.ಎಲ್) ಅಧಿಕಾರಿಗಳ ಭೇಟಿ. ಮಹತ್ವದ ಸಾಕ್ಷ್ಯಗಳ ಸಂಗ್ರಹಣೆ. ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕೃತ್ಯ ಎಸಗಲು ಸಂಚು ರೂಪಿಡಿದ ಮತ್ತು ಚಟುವಟಿಕೆ ನಡೆಸುತ್ತಿದ್ದ ಒಟ್ಟು 11 ಸ್ಥಳಗಳ ಮೇಲೆ ದಾಳಿ
- ಪ್ರಯೋಗಾರ್ಥವಾಗಿ ಸ್ಫೋಟಕಗಳನ್ನು ಶಿವಮೊಗ್ಗದ ಹಲವೆಡೆ ಸ್ಫೋಟಿಸಿರುವ ಸ್ಫೋಟಕ ಮಾಹಿತಿ ಬೆನ್ನಲ್ಲೇ ಎಫ್.ಎಸ್.ಎಲ್ ತಂಡದಿಂದ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು
- ಶಿವಮೊಗ್ಗ ಸೇರಿದಂತೆ ದೇಶದೆಲ್ಲೆಡೆ ಎನ್.ಐ.ಎ ಕಾರ್ಯಾಚರಣೆ
https://suddikanaja.com/2022/09/21/police-invistigation-in-shimoga/