ಸುದ್ದಿ ಕಣಜ.ಕಾಂ | SHIMOGA CITY | 24 SEP 2022
ಶಿವಮೊಗ್ಗ(shivamogga): ಮಹಾನಗರ ಪಾಲಿಕೆ (city corporation) ವತಿಯಿಂದ ನಾಡ ಹಬ್ಬ ದಸರಾ (dasara) ಪ್ರಯುಕ್ತ ಮಹಿಳಾ ದಸರಾ ಸಮಿತಿಯಿಂದ 75ನೇ ವರ್ಷದ ಸ್ವಾತಂತ್ರೋತ್ಸವ- ಅಮೃತ ಮಹೋತ್ಸವದ ಅಂಗವಾಗಿ ‘ಮಹಿಳಾ ಸ್ವಾತಂತ್ರ್ಯ ನಡಿಗೆ’ಯ ಪ್ರಚಾರ ವಾಹನಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಗೋಪಿ ವೃತ್ತದಿಂದ ಫ್ರೀಡಂ ಪಾರ್ಕ್’ವರೆಗೆ ಆಯೋಜಿಸಿದ್ದ ಪ್ರಚಾರ ವಾಹನಕ್ಕೆ ಮಹಾನಗರ ಪಾಲಿಕೆಯ ಆವರಣದಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ ಚಾಲನೆ ನೀಡಿದರು.
ಮಹಿಳಾ ದಸರಾ ಸಮಿತಿಯ ಅಧ್ಯಕ್ಷೆ ರೇಖಾ ರಂಗನಾಥ್, ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಜ್ಞಾನೇಶ್ವರ್, ವಿಶ್ವನಾಥ್, ಮಂಜುನಾಥ್, ಧೀರಜ್ ಹೊನ್ನವಿಲೆ, ವಿಶ್ವಾಸ್, ರಾಜು, ಶಿವಕುಮಾರ್, ಮಂಜುಳಾ ಶಿವಣ್ಣ, ಅನಿತಾ ರವಿಶಂಕರ್, ಸುವರ್ಣ ಶಂಕರ್, ಸುರೇಖಾ ಮುರುಳಿಧರ್, ಕಲ್ಪನಾ ರಮೇಶ್, ಆರತಿ ಅ.ಮ.ಪ್ರಕಾಶ್, ಮೀನಾ ಗೋವಿಂದ್ ರಾಜ್, ಲಕ್ಷ್ಮೀ ಶಂಕರ್ ನಾಯ್ಕ್ ಸೇರಿದಂತೆ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
SIIMA Awards | ಮಲೆನಾಡಿನ ಪ್ರತಿಭೆಗೆ ಸೈಮಾ ಅವಾರ್ಡ್, ಇವರ ಬಗ್ಗೆ ತಿಳಿಯಲೇಬೇಕಾದ ವಿಚಾರಗಳಿವು