ಸುದ್ದಿ ಕಣಜ.ಕಾಂ | DISTRICT | 05 SEP 2022
ಶಿವಮೊಗ್ಗ: ಶಾಸಕ ಕೆ.ಎಸ್.ಈಶ್ವರಪ್ಪ (KS Eshwarappa) ಅವರು ಮತ್ತೊಮ್ಮೆ ಮಂತ್ರಿಯಾದರೆ ಅಚ್ಚರಿಪಡಬೇಕಾದ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ (Aynur Manjunath) ಭವಿಷ್ಯ ನುಡಿದರು.
READ | ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ರಚ್ಚೆ ಹಿಡಿದ ಮಳೆ, ಮೋಡ ಕವಿದ ವಾತಾವರಣ
ನಗರದ ಕುವೆಂಪು ರಂಗಮಂದಿರ(Kuvempu Rangamandir)ದಲ್ಲಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈಶ್ವರಪ್ಪ ಅವರು ಸಾಧ್ಯವಾದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೇ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕೆಲವು ಬೆಳವಣಿಗೆಗಳ ನಡುವೆ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಹೇಳಿದರು.
ಉತ್ತಮ ವ್ಯಕ್ತಿತ್ವ ಹೊಂದಿದ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರತಿಫಲಾಪೇಕ್ಷೆ ಇಲ್ಲದೇ ವಿದ್ಯಾರ್ಥಿಗಳಿಗೆ ಜ್ಞಾನ ಧಾರೆ ಎರೆಯುವ ಈ ವೃತ್ತಿ ಅತ್ಯಂತ ಗೌರವಯುತವಾದುದ್ದು.
| ಬಿ.ವೈ.ರಾಘವೇಂದ್ರ, ಸಂಸದರು
ಶಾಲೆಗಳನ್ನು ತಮ್ಮ ಮನೆಗಳಂತೆ ಕಾಣಿ
ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿಕ್ಷಕರು ಶಾಲೆಗಳನ್ನು ತಮ್ಮ ಮನೆಯಂತೆ ಭಾವಹಿಸಬೇಕು. ಆಗ ತಾನಾಗಿಯೇ ಅಭಿವೃದ್ಧಿಯಾಗುತ್ತದೆ. ಆದರೆ, ಸಾಕಷ್ಟು ಶಿಕ್ಷಕರಲ್ಲಿ ಈ ಮನಸ್ಥಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ(ಎನ್.ಇ.ಪಿ) ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರುವ ವಿಶ್ವಾಸವಿದೆ. ಹೊಸ ಪಠ್ಯದ ಮೂಲಕ ದೇಶ ಭಕ್ತಿ ಹುಟ್ಟಿಸುವ ಕೆಲಸ ಮಾಡಲಾಗಿದೆ. ಆದರೆ, ಇದನ್ನು ಕೋಮುವಾದ ಎಂದು ಬಿಂಬಿಸಿ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ, ಇದ್ಯಾವುದಕ್ಕೂ ನಾವು ಹೆದರುವುದಿಲ್ಲ ಎಂದರು.
READ | ಒಂದು ವಾರದಿಂದ ಹೇಗಿದೆ ಅಡಿಕೆ ಧಾರಣೆ ಟ್ರೆಂಡ್?
ಸಾಹಿತಿ ಚಟ್ನಹಳ್ಳಿ ಮಹೇಶ್ ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಮೇಯರ್ ಸುನೀತಾ ಅಣ್ಣಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕರಕ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ದಿವಾಕರ್, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಜೆ.ಸುಮತಿ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್.ರಾಘವೇಂದ್ರ, ಪ್ರಮುಖರಾದ ಡಿ.ಬಿ.ರುದ್ರಪ್ಪ, ಆರ್.ಅಂಜನಪ್ಪ, ಎಸ್.ಕಾಳಾನಾಯ್ಕ್, ಬಿ.ಆರ್.ಬಸವರಾಜಪ್ಪ, ಬಿಇಓ ಪಿ.ನಾಗರಾಜ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸೇವಾ ನಿವೃತ್ತಿಯ ಅವಧಿ ನಿಗದಿ ಗೊಂದಲ ಬೇಡ, ಸರ್ಕಾರದ ಮುಂದೆ ಅಂತಹ ಪ್ರಸ್ತಾವನೆಯೇ ಇಲ್ಲ: ಸಿ.ಎಸ್.ಷಡಾಕ್ಷರಿ