ಸುದ್ದಿ ಕಣಜ.ಕಾಂ | DISTRICT | 03 OCT 2022
ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(SP) ಬಿ.ಎಂ.ಲಕ್ಷ್ಮೀಪ್ರಸಾದ್ (BM Lakshmiprasad) ಅವರನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ತೆರವಾದ ಸ್ಥಾನಕ್ಕೆ ಮಿಥುನ್ ಕುಮಾರ್ Mithun kumar) ಅವರನ್ನು ನಿಯೋಜನೆ ಮಾಡಲಾಗಿದೆ.
ಜಿ.ಕೆ.ಮಿಥುನ್ ಕುಮಾರ್ ಅವರು ಬೆಂಗಳೂರಿನ ಸಿಐಡಿ ಎಸ್.ಪಿ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ಶಿವಮೊಗ್ಗ ಎಸ್.ಪಿ.ಯಾಗಿ ನಿಯೋಜಿಸಲಾಗಿದೆ.
ಕಳೆದ ವರ್ಷ ಏಪ್ರಿಲ್ ನಲ್ಲಿ ಲಕ್ಷ್ಮೀಪ್ರಸಾದ್ ಅವರು ಶಿವಮೊಗ್ಗ ಎಸ್.ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಹಲವು ಜನಪರ ಕೆಲಸಗಳನ್ನು ಮಾಡುವ ಮೂಲಕ ದಕ್ಷ ಅಧಿಕಾರಿ ಎಂಬ ಖ್ಯಾತಿಯನ್ನು ಸಹ ಪಡೆದಿದ್ದಾರೆ.