ಸುದ್ದಿ ಕಣಜ.ಕಾಂ | KARNATAKA | 20 OCT 2022
ಶಿವಮೊಗ್ಗ(Shivamogga): ನಗರದ ಸೈನ್ಸ್ ಫೀಲ್ಡ್(science field)ನಲ್ಲಿ ಅಕ್ಟೋಬರ್ 22ರಂದು ಸಂಜೆ 5 ಗಂಟೆಗೆ ‘ಸಾವರ್ಕರ್ ಸಾಮ್ರಾಜ್ಯ‘ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದರು.
VIDEO REPORT | ಶಾಸಕ ಕೆ.ಎಸ್.ಈಶ್ವರಪ್ಪ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ, ಹಲಾಲ್ ಕಟ್… ಇವುಗಳ ಬಗ್ಗೆ ಹೇಳಿದ್ದೇನು? ವಿಡಿಯೋ ವೀಕ್ಷಿಸಿ
READ | ದೀಪಾವಳಿ ಪ್ರಯುಕ್ತ ಶಿವಮೊಗ್ಗ-ಯಶವಂತಪುರ ಸೇರಿದಂತೆ ರಾಜ್ಯದ ವಿವಿಧೆಡೆ ಸ್ಪೆಷಲ್ ರೈಲು, ವೇಳಾಪಟ್ಟಿ ಇಲ್ಲಿದೆ
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮವು ಶ್ರೀಗಂಧ ಸಂಸ್ಥೆ, ಸಾಮಗಾನ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
1944ರಲ್ಲಿ ವೀರ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಜೀವನದುದ್ದಕ್ಕೂ ಸ್ವಾಭಿಮಾನ, ಸಶಕ್ತ ಭಾರತದ ಕನಸು ಕಂಡ ವೀರ ಸಾವರ್ಕರ್ ಅನುಭವಿಸಿದ ಕಠಿಣ ಕರಿನೀರಿನ ಶಿಕ್ಷೆಯ ಅಧ್ಯಾಯವನ್ನು ದೇಶಭಕ್ತರು ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಾವರ್ಕರ್ ಮೊಮ್ಮಗನಾದ ರಾಷ್ಟ್ರವಾದಿ ಚಿಂತಕ ಸಾತ್ಯಕಿ ಸಾವರ್ಕರ್, ಕರ್ನಾಟಕ ದೇವಸ್ಥಾನ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ (ಮುನಿಯಪ್ಪಾಜೀ) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರವಾದಿ ಚಿಂತಕಿ ಶ್ರೀಲಕ್ಷ್ಮೀ ರಾಜಕುಮಾರ್ ಪ್ರಧಾನ ಭಾಷಣ ರವರು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರು ಶಾಸಕ ಕೆ.ಎಸ್. ಈಶ್ವರಪ್ಪ ವಹಿಸಲಿದ್ದು, ಸಾಮಗಾನ ಸಂಸ್ಥೆಯ ಗೌರವಧ್ಯಕ್ಷ ಕೆ.ಈ ಕಾಂತೇಶ್ ಉಪಸ್ಥಿತರಿರುವರು ಎಂದರು.
* ಸಾವರ್ಕರ್ ರಚನೆಯ ಹಾಡುಗಳ ಸಮೂಹ ಗಾಯನ
ಈ ಸಮಾರಂಭದಲ್ಲಿ ಸಾವರ್ಕರ್ ರಚನೆಯ ಹಾಡುಗಳನ್ನಯ 600ಕ್ಕೂ ಮಾತೆಯರು ಹಾಗೂ ಮಹನೀಯರಿಂದ ಏಕಕಂಠದಲ್ಲಿ ಸಮೂಹ ಗಾಯನ ನಡೆಯಲಿದೆ. ಸಾತ್ಯಕಿ ಸಾವರ್ಕರ್ ಅವರನ್ನು ಸ್ವಾಗತಿಸುವ ನಿಟ್ಟಿನಲ್ಲಿ ಸಂಜೆ 4.40ಕ್ಕೆ ಬೃಹತ್ ಬೈಕ್ ಹಾಗೂ ಆಟೋ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಮುಖರಾದ ಕೆ.ಈ. ಕಾಂತೇಶ್, ಸೂಡಾ ಅಧ್ಯಕ್ಷ ನಾಗರಾಜ್, ಇ.ವಿಶ್ವಾಸ್, ವಿನಯ್, ಚೇತನ್ ದೀನದಯಾಳ್, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.
https://suddikanaja.com/2022/10/19/bs-yediyurappa-delegation-meat-central-minister-at-newdelhi/