ಸುದ್ದಿ ಕಣಜ.ಕಾಂ | DISTRICT | 2022
ಶಿವಮೊಗ್ಗ: ಮೆಲ್ಬೋರ್ನ್ ನೆಲದಲ್ಲಿ ಭಾನುವಾರ ನಡೆದ ಭಾರತ-ಪಾಕಿಸ್ಥಾನ ನಡುವಿನ ಟಿ-20 ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾರತ ರೋಚಕ ಗೆಲುವು ಸಾಧಿಸಿದ್ದಕ್ಕೆ ಶಿವಮೊಗ್ಗದಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ.
READ | ವಿಮೆ ಪಾವತಿಗೂ ಮುನ್ನ ಹುಷಾರ್, ವಿಮೆ ಹೆಸರಿನಲ್ಲಿ ಲಕ್ಷಾಂತರ ಮೋಸ
ಪಟಾಕಿ ಸಿಡಿಸಿ, ಸಿಹಿ ಹಂಚಿ ಭಾರತದ ಗೆಲುವನ್ನು ಸಂಭ್ರಮಿಸಿದ್ದು, ಮಲವಗೊಪ್ಪದಲ್ಲಿ ನಾಗರಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೇ ಟೀಂ ಇಂಡಿಯಾ ಪರ ಘೋಷಣೆ ಕೂಗಿದರು.
ಡಿ.ಎಸ್.ಅರುಣ್ ಸ್ನೇಹಿತರೊಂದಿಗೆ ಸಂಭ್ರಮ
ಪಂದ್ಯಾವಳಿಯಲ್ಲಿ ಭಾರತ ಗೆಲುವು ಸಾಧಿಸಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರು ಸ್ನೇಹಿತರೊಂದಿಗೆ ಪಟಾಕಿ ಸಿಡಿಸಿ ಭಾರತ ಮತ್ತು ಟೀಂ ಇಂಡಿಯಾ ಪರ ಘೋಷಣೆ ಕೂಗಿದರು.
https://suddikanaja.com/2022/10/23/sambhavami-yuge-yuge-song-release-at-shivamogga-event-of-hindu-mahasabha-ganapathi/