HIGHLIGHTS
- ಶಿಕಾರಿಪುರ ಪಟ್ಟಣದಲ್ಲಿ ಆರ್.ಟಿ.ಓ ತನಿಖಾ ತಂಡದಿಂದ ದಾಳಿ
- ತೆರಿಗೆ ಪಾವತಿಸದೇ ಸಂಚರಿಸುತ್ತಿದ್ದ ಮೂರು ಬೃಹತ್ ವಾಹನಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು
ಸುದ್ದಿ ಕಣಜ.ಕಾಂ | TALUK | 24 OCT 2022
ಶಿಕಾರಿಪುರ(shikaripura): ಆರ್.ಟಿ.ಓ ತನಿಖಾ ತಂಡವು ಮೂರು ಜೆಸಿಬಿ, ಒಂದು ಬಸ್ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದೆ.
ಪಟ್ಟಣದಲ್ಲಿ ಅಧಿಕೃತ ನೋಂದಣಿ ಮಾಡಿಸದೇ ಹಾಗೂ ತೆರಿಗೆ ಕಟ್ಟದೇ ಬೃಹತ್ ವಾಹನಗಳನ್ನು ಬಳಸಲಾಗುತ್ತಿತ್ತು.
READ | ಶಿವಮೊಗ್ಗ ಜಿಲ್ಲೆಯಲ್ಲಿ ಬರೀ 15 ದಿನಗಳ 41 ಜನರ ವಿರುದ್ಧ ಕೇಸ್ ದಾಖಲು
ಎಷ್ಟು ಹಣ ಬರಬೇಕಿತ್ತು?
- ಪ್ರತಿ ಜೆಸಿಬಿಯಿಂದ 2 ಲಕ್ಷ ರೂ. ಬಾಕಿ | ಜೆಸಿಬಿಗಳು ಕಳೆದ ಎರಡು ವರ್ಷಗಳಿಂದ ತೆರಿಗೆ ಹಣ ಪಾವತಿಸದೇ ಹಾಗೆಯೇ ಕಾರ್ಯನಿರ್ವಹಿಸುತ್ತಿದ್ದವು. ಪತ್ತೆ ಹೆಚ್ಚಿದ ತನಿಖೆ ತಂಡವು ವಾಹನಗಳನ್ನು ವಶಕ್ಕೆ ಪಡೆದಿದೆ. ಪ್ರತಿ ಜೆಸಿಬಿಯಿಂದ 2 ಲಕ್ಷ ರೂಪಾಯಿಗೂ ಅಧಿಕ ಹಣ ಸರ್ಕಾರಕ್ಕೆ ಬರಬೇಕಿದೆ.
- ಶಿರಾಳಕೊಪ್ಪದಲ್ಲಿ ಸಂಚರಿಸುತ್ತಿದ್ದ ಬಸ್ | ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದ್ದ ಬಸ್ ಅನ್ನು ಶಿರಾಳಕೊಪ್ಪ ಭಾಗದಲ್ಲಿ ಸಂಚರಿಸುತ್ತಿತ್ತು. ಬಸಬ್ ಮಾಲೀಕರು ತೆರಿಗೆ ಕಟ್ಟಿರಲಿಲ್ಲ. ಹೀಗಾಗಿ, ಈ ಬಸ್ ಅನ್ನು ಸಹ ವಶಕ್ಕೆ ಪಡೆಯಲಾಗಿದೆ.
- ಲಾರಿಯಿಂದಲೂ ತೆರಿಗೆ ವಂಚನೆ | ಅದೇ ರೀತಿ, ಆನಂದಪುರಕ್ಕೆ ಸೇರಿದ್ದ ಲಾರಿ ಸಹ ತೆರಿಗೆ ಪಾವತಿಸಿರಲಿಲ್ಲ. ಹೀಗಾಗಿ, ವಶಕ್ಕೆ ಪಡೆಯಲಾಗಿದೆ.
ಆರ್.ಟಿ.ಓ ಅಧಿಕಾರಿ ಗಾಯತ್ರಿ ದೇವಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ತನಿಖಾಧಿಕಾರಿ ವಾಸುದೇವ್ ನೇತೃತ್ವದಲ್ಲಿ ಸಿಬ್ಬಂದಿ ಉಮೇಶ್, ಪಂಚಾಕ್ಷರಿ ಇತರರು ಕಾರ್ಯಾಚರಣೆ ಕೈಗೊಂಡಿದ್ದಾರೆ.
T20 World Cup | ಪಾಕ್ ವಿರುದ್ಧ ಭಾರತ ಗೆಲುವು, ಶಿವಮೊಗ್ಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮ