ಸುದ್ದಿ ಕಣಜ.ಕಾಂ | DISTRICT | 29 OCT 2022
ಭದ್ರಾವತಿ: ಶಾಸಕ ಬಿ.ಕೆ.ಸಂಗಮೇಶ್ (BK Sangamesh) ಅವರ ಮೇಲೆಯೂ ಆಪರೇಷನ್ ಕಮಲ (Operation Lotus) ಮಾಡಲಾಗಿತ್ತು. ಆದರೆ, ಅವರಲ್ಲಿ ಪಕ್ಷದ ಬಗ್ಗೆ ಅಪಾರ ನಿಷ್ಠೆ ಇದ್ದುದ್ದರಿಂದ ಆಮೀಷಗಳಿಗೆ ಒಳಗಾಗಲಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆರೋಪಿಸಿದರು.
READ | ಮಲೆನಾಡಿನಲ್ಲಿ ಮೊಳಗಿನ ಕೋಟಿ ಕಂಠ ಗಾಯನ, ಶಿವಮೊಗ್ಗದಲ್ಲಿ ಎಷ್ಟು ಜನ ನೋಂದಾಯಿಸಿಕೊಂಡಿದ್ದರು?
ನಗರದಲ್ಲಿ ಶುಕ್ರವಾರ ಸಂಜೆ ನಡೆದ ಸಂಗಮೇಶ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗಮೇಶ್ ಬಿಜೆಪಿಗೆ ಸೇರ್ಪಡೆಯಾಗಿದ್ದರೆ 50 ಕೋಟಿ ರೂಪಾಯಿ ಸಿಗುತ್ತಿತ್ತು. ಆದರೆ, ಅವರು ದುಡ್ಡಿಗೆ ಆಸೆ ಪಡದೇ ಕಾಂಗ್ರೆಸ್ ನಲ್ಲಿಯೇ ಉಳಿದುಕೊಂಡರು ಎಂದು ಹೇಳಿದರು.
ರಾಜ್ಯದಲ್ಲಿ ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನಂತರ, ಬಿ.ಕೆ.ಸಂಗಮೇಶ್ ಅವರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಮಾತನಾಡುವೆ. ನಾನು ಭದ್ರಾವತಿ ಜನರಿಗೆ ಧನ್ಯವಾದಗಳನ್ನು ಹೇಳುವುದಕ್ಕಾಗಿ ಬಂದಿದ್ದೇನೆ. ಬಿಜೆಪಿಯ ಅಲೆ ಇದ್ದಾಗಲೂ ಸಂಗಮೇಶ್ ಅವರನ್ನು ಗೆಲ್ಲಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಬಿಜೆಪಿ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವರಿಬ್ಬರೂ ಜೋಕರ್ ಆಟವಾಡುತ್ತಾರೆ. ಮತ ಹಾಕಬೇಕಾದರೆ ಹೆಂಡತಿಯನ್ನೂ ಅವ್ವ ಎನ್ನುತ್ತಾರೆ.
| ಡಿ.ಕೆ.ಶಿವಕುಮಾರ್, ಅಧ್ಯಕ್ಷ, ಕೆಪಿಸಿಸಿ
ಬಿ.ಕೆ.ಸಂಗಮೇಶ್ ಅವರು ಜಾತ್ಯತೀತ ರಾಜಕಾರಣಿಯಾಗಿದ್ದು, ಕ್ಷೇತ್ರದಲ್ಲೂ ಎಲ್ಲರೊಂದಿಗೆ ಸಾಮರಸ್ಯದಿಂದ ಇದ್ದಾರೆ. ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದಾರೆ. ಸಂಗಮೇಶ್ ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ ಎಂದರು.
ಪಕ್ಷ ಅಧಿಕಾರಕ್ಕೆ ಬಂದರೆ ಎಂಪಿಎಂ ಪುನರಾರಂಭ
ಭದ್ರಾವತಿಯ ಅಭಿವೃದ್ಧಿಗೆ ಬಿ.ಕೆ.ಸಂಗಮೇಶ್ ಕಾರಣ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಂಪಿಎಂ ಕಾರ್ಖಾನೆಯನ್ನು ಪುನರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಧ್ರುವನಾರಾಯಣ್, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಕೆ.ಬಿ.ಪ್ರಸನ್ನಕುಮಾರ್, ಮಧು ಬಂಗಾರಪ್ಪ, ಶ್ರೀನಿವಾಸ್, ಎಂ.ಆರ್.ಸೀತಾರಾಂ, ಭೈರತಿ ಸುರೇಶ್, ಬಿ.ವಿ.ಶ್ರೀನಿವಾಸ್ ಸೇರಿದಂತೆ ಪಕ್ಷದ ಪ್ರಮುಖರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Shimul Milk Rate | ಹೈನುಗಾರರಿಗೆ ಗುಡ್ ನ್ಯೂಸ್, ಕನ್ನಡ ರಾಜ್ಯೋತ್ಸವಕ್ಕೆ ಶಿಮುಲ್ ಕೊಡುಗೆ