ಸುದ್ದಿ ಕಣಜ.ಕಾಂ | TALUK | 29 OCT 20222
ಸೊರಬ(Sorab): ತಾಲೂಕಿನ ಜಡೆ (Jade) ಗ್ರಾಮದಲ್ಲಿ ಹೋರಿ ತಿವಿದು ಯುವಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
READ | ಸಂಗಮೇಶ್ ಮೇಲೂ ಆಪರೇಷನ್ ಕಮಲ ನಡೆದಿತ್ತು, ಸ್ಫೋಟಕ ಮಾಹಿತಿ ಹಂಚಿಕೊಂಡು ಸಿದ್ದರಾಮಯ್ಯ
ಜಡೆ ಸಮೀಪದ ಚಗಟೂರು ಗ್ರಾಮದ ಆದಿ(20) ಮೃತರು. ಸಾಂಪ್ರದಾಯಿಕವಾಗಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ (Hori habba) ಯುವಕನಿಗೆ ಹೋರಿ ತಿವಿದಿದ್ದು, ಆತ ಮೃತಪಟ್ಟಿದ್ದಾನೆ.
ಗಂಭೀರ ಗಾಯಗೊಂಡಿದ್ದ ಆದಿಯನ್ನು ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ..
https://suddikanaja.com/2022/10/29/today-gold-silver-rate-decline-in-karnataka/