ಸುದ್ದಿ ಕಣಜ.ಕಾಂ | SHIMOGA CITY | 30 OCT 2022
ಶಿವಮೊಗ್ಗ(Shivamogga): ಬಿ.ಎಚ್.ರಸ್ತೆ(BH Road)ಯಲ್ಲಿರುವ ರಾಯಲ್ ಆರ್ಕಿಡ್ ಸಮೀಪ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಅಶೋಕ್ ಪ್ರಭು ಎಂಬಾತನ ಮೇಲೆ ಹಲ್ಲೆ ಮಾಡಲಾಗಿದ್ದು, ನಾಲ್ವರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
READ | ಶಿವಮೊಗ್ಗದ ಹಲವೆಡೆ ಮತ್ತೆ ಕಾಡಾನೆ ದಾಳಿ, ಬಾಳೆ, ಅಡಿಕೆ ತೋಟಕ್ಕೆ ನುಗ್ಗಿದ ಪುಂಡಾನೆ
ಅಶೋಕ್ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದುಷ್ಕರ್ಮಿಗಳು ಸಹ ನಡೆದುಕೊಂಡೇ ಬಂದಿದ್ದಾರೆ. ನಂತರ, ಆತನನ್ನು ತಳ್ಳಿದ್ದಾರೆ. ಆಯತಪ್ಪಿ ಆತ ಬಿದ್ದಿದ್ದಾನೆ. ಮೊಬೈಲ್ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಚೂಪಾದ ವಸ್ತುವಿನಿಂದ ಆತನ ಕೆನ್ನೆಯ ಕೆಳಭಾಗಕ್ಕೆ ಹಲ್ಲೆ ಮಾಡಿದ್ದಾರೆ. ರಕ್ಷಣೆಗೋಸ್ಕರ ಆತನ ಅಂಗಡಿಯೊಂದಕ್ಕೆ ಓಡಿದ್ದಾನೆ.
ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
https://suddikanaja.com/2022/10/30/rajyotsava-award-2022-two-person-from-shivamogga-secured-award/