ಸುದ್ದಿ ಕಣಜ.ಕಾಂ | TALUK NEWS | 20 OCT 2022
ಶಿಕಾರಿಪುರ(shikaripura): ತಾಲೂಕಿನ ಶಿರಾಳಕೊಪ್ಪ (Shiralakoppa) ಪಟ್ಟಣದ ಭದ್ರಾಪುರ ಹತ್ತಿರ ಭೀಕರ ಅಪಘಾತ (accident) ಸಂಭವಿಸಿದ್ದು, ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
READ | ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಸಾವರ್ಕರ್ ಮೊಮ್ಮಗ, ನಡೆಯಲಿದೆ ‘ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮ
ಅಪಘಾತದಲ್ಲಿ ಹೆತ್ತವರ ಸಾವು
ಸರಕು ವಾಹನ ಮತ್ತು ಓಮ್ನಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸೊರಬ (soraba) ತಾಲೂಕಿನ ತಿಮ್ಮಾಪುರ ಗ್ರಾಮದ ಮೈಲಾರಪ್ಪ(57) ಹಾಗೂ ಅವರ ಪತ್ನಿ ಮಲ್ಲವ್ವ ಮೃತಪಟ್ಟಿದ್ದಾರೆ. ಮೈಲಾರಪ್ಪ ಸ್ಥಳದಲ್ಲೇ ಅಸುನೀಗಿದ್ದು, ಮಲ್ಲವ್ವ ಆಸ್ಪತ್ರೆಗೆ ಕರೆದುಕೊಂಡು ಬಂದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೈಲಾರಪ್ಪ ಅವರ ಪುತ್ರಿ ಶಿಲ್ಪಾ ಹಾಗೂ ಓಮ್ನಿ ಚಾಲಕ ಕೃಷ್ಣಮೂರ್ತಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಡ್ಯೂಟಿಗೆ ರಿಪೋರ್ಟ್ ಆಗಲು ಹೋಗುತ್ತಿದ್ದ ಶಿಲ್ಪಾ
ಶಿಲ್ಪಾ ಅವರು ಹೊಳಲೂರಿನಲ್ಲಿ ಶಿಕ್ಷಕಿಯಾಗಿದ್ದು, ತಿಂಗಳ ಹಿಂದೆ ಅವರ ಪತಿ ಮೃತಪಟ್ಟ ಕಾರಣಕ್ಕೆ ರಜೆಯಲ್ಲಿದ್ದರು. ರಜೆ ಮುಗಿದ ಬಳಿಕ ಡ್ಯೂಟಿಗೆ ರಿಪೋರ್ಟ್ ಆಗುವುದಕ್ಕೆ ಹೋಗುತ್ತಿದ್ದರು. ಈ ವೇಳೆ, ಘಟನೆ ನಡೆದಿದೆ. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2022/10/19/scientists-for-the-scientific-committee-to-study-and-address-the-issue-of-yld-in-arecanut-in-karnataka-other-states/