ಸುದ್ದಿ ಕಣಜ.ಕಾಂ | TALUK | 24 OOCT 2022
ಭದ್ರಾವತಿ(Bhadravathi): ಆಟೋ ಚಾಲಕನೊಬ್ಬನ ಶವವು ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದೊಣ್ಣೆಯಿಂದ ಹೊಡೆದು ಸಾಯಿಸಿರಬೇಕು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
READ | ವಾಹನ ಮಾಲೀಕರಿಗೆ ಆರ್.ಟಿ.ಓ ಶಾಕ್, ಐದು ಬೃಹತ್ ವಾಹನಗಳು ಸೀಜ್
ಭದ್ರಾವತಿಯ ಎಪಿಎಂಸಿ ಸಮೀಪ ರೂಪೇಶ್ ಕುಮಾರ್ (45) ಎಂಬಾತನ ಶವ ಸೋಮವಾರ ಪತ್ತೆಯಾಗಿದೆ. ಕೊಲೆಯಾದ ರೂಪೇಶ್ ಹೊಳೆಹೊನ್ನೂರು ಮೂಲದವನಾಗಿದ್ದು, ಶಿವಮೊಗ್ಗದಲ್ಲಿ ವಾಸವಾಗಿದ್ದ.
ಯಾವ ಉದ್ದೇಶಕ್ಕಾಗಿ ಯಾರು ಕೊಲೆ ಮಾಡಿದ್ದಾರೆ ಎಂಬುವುದರ ಬಗ್ಗೆ ಖಚಿತವಾಗಿ ತಿಳಿದುಬಂದಿಲ್ಲ. ಶವದ ಪಕ್ಕವೇ ದೊಣ್ಣೆ ಸಿಕ್ಕಿದ್ದು, ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
https://suddikanaja.com/2022/10/24/theft-in-retired-asi-house-at-rippanpete/