HIGHLIGHTS
- ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಕೆಪಿಸಿಎಲ್ ಚೆಕ್ ಪೋಸ್ಟ್’ನಲ್ಲಿ ಭದ್ರತಾ ಸಿಬ್ಬಂದಿ, ಪಿಎಸ್.ಐ ನಡುವೆ ಮಾತಿನ ಚಕಮಕಿ
- ಪಾಸ್ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ಪಿಎಸ್.ಐ, ವಿಡಿಯೋಗಳು ವೈರಲ್
- ಕೆಪಿಸಿಎಲ್ ವ್ಯಾಪ್ತಿಯ ಪ್ರದೇಶಗಳಲ್ಲಿ ಪ್ರವೇಶಿಸುವುದಕ್ಕೆ ನಿರ್ಬಂಧ ಎಂಬ ಕಾರಣಕ್ಕೆ ಕರ್ತವ್ಯನಿರತ ಪಿಎಸ್.ಐ ಅನ್ನು ಒಳಗೆ ಬಿಡದ ಸೆಕ್ಯೂರಿಟಿ ಗಾರ್ಡ್
ಸುದ್ದಿ ಕಣಜ.ಕಾಂ | DISTRICT | 16 OCT 2022
ಶಿವಮೊಗ್ಗ(shivamogga): ಸಾಗರ (sagar) ತಾಲೂಕಿನ ಕಾರ್ಗಲ್ (Kargal) ಪಿಎಸ್ಐ ಹಾಗೂ ಕೆಪಿಸಿಎಲ್ (KPCL) ಭದ್ರತಾ ಸಿಬ್ಬಂದಿ (Security personnel) ನಡುವಿನ ಮಾತಿನ ಚಕಮಕಿಯ ವಿಡಿಯೋವೊಂದು ವೈರಲ್ ಆಗಿದೆ. ಇದರ ಬೆನ್ನಲ್ಲೇ ಸಿಟಿ ಟಿವಿ ವಿಡಿಯೋ ಹಾಗೂ ಪಿಎಸ್.ಐ ಮತ್ತು ಭದ್ರತಾ ಸಿಬ್ಬಂದಿ ಮಾತನಾಡಿದ ವಿಡಿಯೋಗಳು ಸಹ ಸೋಶಿಯಲ್ ಮೀಡಿಯಾ(social media)ದಲ್ಲಿ ವೈರಲ್ ಆಗಿವೆ.
CLICK FOR VIRAL VIDEO
ಏನಿದು ವಿವಾದ, ಸ್ಫೋಟಗೊಂಡಿದ್ದು ಹೇಗೆ?
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಭದ್ರತಾ ಸಿಬ್ಬಂದಿಯು ಕಾರ್ಗಲ್ ಪಿಎಸ್.ಐ ತಿರುಮಲೇಶ್ ಅವರ ಜೀಪ್ ಅನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಇದೇ ವಿಚಾರವಾಗಿ ಮಾತಿನ ಚಕಮಕಿ ಆರಂಭಗೊಂಡಿದೆ.
ಇದೇ ವಿಚಾರವಾಗಿ ಹಲವು ಸಲ ಘರ್ಷನೆಗಳಾಗಿವೆ. ಈ ವಿಚಾರವೂ ಗಮನಕ್ಕೆ ಬಂದಿದೆ. ನಿಯಮಗಳೇನು ಎಂಬ ಬಗ್ಗೆ ಪರಿಶೀಲಿಸಲಾಗುವುದು.
| ಮಿಥುನ್ ಕುಮಾರ್, ಎಸ್ಪಿ
ಭದ್ರತಾ ಸಿಬ್ಬಂದಿ ಹೇಳುವುದೇನು?
“ಕೆಪಿಸಿಎಲ್ ಆವರಣ ಪ್ರವೇಶಿಸಬೇಕಾದರೆ, ಕಡ್ಡಾಯವಾಗಿ ಪ್ರವೇಶ ಪಾಸ್ (entry pass) ಹೊಂದಿರಬೇಕು. ಇಲ್ಲದಿದ್ದರೆ, ಒಳಗೆ ಬರುವಂತಿಲ್ಲ. ಕೆಪಿಸಿಎಲ್ ಹಿರಿಯ ಅಧಿಕಾರಿಗಳಿಂದ ಪಾಸ್ ಪಡೆಯುವುದು ಕಡ್ಡಾಯ. ಪೊಲೀಸರು ಒಳಗೆ ಪ್ರವೇಶಿಸಬೇಕಾದರೆ, ತಮ್ಮ ವಾಕಿಟಾಕಿ ಮೂಲಕ ಜಿರಿಯ ಅಧಿಕಾರಿಗಳನ್ನು ವಿಚಾರಿಸಬೇಕು. ಅವರು ಒಳಗಡೆ ಬಿಡುವಂತೆ ಪರವಾನಗಿ ನೀಡಿದರೆ ಬಿಡಲಾಗುವುದು” ಎನ್ನುವುದು ಕೆಪಿಸಿಎಲ್ ಭದ್ರತಾ ಸಿಬ್ಬಂದಿಯ ಅಭಿಪ್ರಾಯ.
READ | ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, “ಕ್ಯಾನ್ಸರ್’ಕಾರಕವಲ್ಲ” ವರದಿ ಬಗ್ಗೆ ಆರಗ ಜ್ಞಾನೇಂದ್ರ ಹೇಳಿದ್ದೇನು?
ಪಿಎಸ್.ಐ ತಿರುಮಲೇಶ್ ಹೇಳುವುದೇನು?
ಯೂನಿಫಾರಂನಲ್ಲಿ ಬರುವ ಪೊಲೀಸ್ ಅಧಿಕಾರಿಯು ಕರ್ತವ್ಯದ ಮೇಲೆ ಬಂದರೆ ಅವರಿಗೆ ಪಾಸ್ ಅಗತ್ಯವಿಲ್ಲ. ಅದರಲ್ಲೂ ಈ ಪ್ರದೇಶ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವುದರಿಂದ ಪಾಸ್ ಅಗತ್ಯವಿಲ್ಲ. ಪಾಸ್ ಬೇಕೆನ್ನುವ ಆದೇಶವಿದ್ದರೆ ಕಳುಹಿಸಿ, ಆಗ ನಾವು ಒಳಗಡೆ ಬರುವುದಿಲ್ಲ’ ಎನ್ನುವುದು ಪಿಎಸ್.ಐ ಅಭಿಪ್ರಾಯ.
ವೈರಲ್ ವಿಡಿಯೋಗಳಲ್ಲಿ ಏನಿದೆ?
ಘಟನೆ ನಡೆದ ಬೆನ್ನಲ್ಲೇ ಸಿಸಿ ಟಿವಿ (CC TV) ದೃಶ್ಯಾವಳಿ ಮತ್ತಿತರ ವಿಡಿಯೋಗಳು ವೈರಲ್ ಆಗಿವೆ. ಚೆಕ್ ಪೋಸ್ಟ್ (check post)ನಲ್ಲಿ ತಡೆದಿದ್ದಕ್ಕೆ ತಿರುಮಲೇಶ್ ಅವರು ಭದ್ರತಾ ಸಿಬ್ಬಂದಿಯನ್ನು ತಳ್ಳಿರುವ ದೃಶ್ಯ ಸಿಸಿ ಟಿವಿ ದೃಶ್ಯಾವಳಿಯಲ್ಲಿದೆ.
READ | ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ‘ಕೃಷಿ ಗಣತಿ’, ಹೇಗೆ ನಡೆಯುತ್ತೆ ಸರ್ವೇ?
ಪ್ರವೇಶ ನಿಷೇಧಕ್ಕೇನು ಕಾರಣ?
ಶರಾವತಿ ಹಿನ್ನೀರು (sharavathi back water) ಭಾಗದಲ್ಲಿ ಜಲವಿದ್ಯುದಾಗರವಿದೆ. ಇದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಒಳಗೆ ಯಾರೇ ಪ್ರವೇಶಿಸಬೇಕಾದರೂ ಪಾಸ್ ಪಡೆಯುದು ಕಡ್ಡಾಯ. ಕೆಪಿಸಿಎಲ್ ಸಿಬ್ಬಂದಿ ಹೊರತು ಯಾರೂ ಒಳಗಡೆ ಹೋಗುವಂತಿಲ್ಲ. ಈ ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿ ವಡನ್’ಬೈಲು, ಸುಂಕದಮನೆ, ಮರಾಠಿ ಕ್ಯಾಂಪ್ ಸೇರಿ ಹಲವು ಗ್ರಾಮಗಳಿವೆ. ಇದೇ ವ್ಯಾಪ್ತಿಯಲ್ಲಿ ಪದ್ಮಾವತಿ ದೇವಿ ದೇವಸ್ಥಾನವೂ ಇದೆ. ಈ ಧಾರ್ಮಿಕ ಕೇಂದ್ರಕ್ಕೆ ಭಕ್ತರು ಬರಬೇಕಾದರೆ ಪಾಸ್ ಪಡೆಯುತ್ತಾರೆ.
ಕೆಪಿಸಿಎಲ್ ಅಧಿಕಾರಿಗಳೇನು ಹೇಳುತ್ತಾರೆ?
ಕೆಪಿಸಿಎಲ್ ಅಧಿಕಾರಿಗಳು ಹೇಳುವಂತೆ, “ಕರ್ತವ್ಯನಿರತ ಪೊಲೀಸರು ಅದರಲ್ಲೂ ಸಮವಸ್ತ್ರದಲ್ಲಿರುವಾಗ ಪಾಸ್ ಅಗತ್ಯವಿರುವುದಿಲ್ಲ.”
Home Guards | ನೀವು ಗೃಹರಕ್ಷಕ ದಳ ಸೇರಬೇಕೆ? ನೋಂದಣಿಯೊಂದೇನು ಲಾಭ, ಎಷ್ಟು ಸ್ಥಾನಗಳ ಭರ್ತಿ?