ಸುದ್ದಿ ಕಣಜ.ಕಾಂ ಶಿವಮೊಗ್ಗ
Shivamogga: ತೀರ್ಥಹಳ್ಳಿ(Thirthahalli)ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಕಿರಿಯ ಎಂಜಿನಿಯರ್ ಮುರುಗೇಶ್ ಎಂಬುವವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾ ಪಂಚಾಯಿತಿ ಸಿಇಓ ಎನ್.ಡಿ. ಪ್ರಕಾಶ್ ಅವರು ಆದೇಶ ಹೊರಡಿಸಿದ್ದಾರೆ.
ಅಮಾನತು ಅವಧಿಯಲ್ಲಿ ಮುರುಗೇಶ್ ಅವರು ಸಮ ಪ್ರಾಧಿಕಾರದ ಅನುಮತಿ ಇಲ್ಲದ ಕೇಂದ್ರಸ್ಥಾನವನ್ನು ಬಿಡುವಂತಿಲ್ಲ. ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958ರ ನಿಯಮ 98 ರ ಅನುಸಾರ ಜೀವಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
READ | ಶಿಕಾರಿಪುರ ಸಾರ್ವಜನಿಕ ಸಭೆಯಲ್ಲೇ ವಿಜಯೇಂದ್ರಗೆ ‘ಭಾವಿ ಎಂಎಲ್ಎ’ ಎಂದು ಘೋಷಿಸಿದ ಜನಸ್ತೋಮ
ಯಾವ ಕಾರಣಕ್ಕೆ ಅಮಾನತು?
- ಸಾಮಾಜಿಕ ಜಾಲತಾಣದಲ್ಲಿ ಕುಡಿಯುವ ನೀರಿನ ಪೂರೈಕೆಯ ಬಗ್ಗೆ ಸುದ್ದಿಯೊಂದು ವೈರಲ್ ಆಗಿದ್ದು, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕ ಸಸ್ಪೆಂಡ್ ಮಾಡಲಾಗಿದೆ. ಮಾಡಲಾದ ಆರೋಪಗಳಿವು.
- ತೀರ್ಥಹಳ್ಳಿ ತಾಲ್ಲೂಕು ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಗಲವಳ್ಳಿ ಹಳ್ಳಿಯಲ್ಲಿ ಕೇಂದ್ರದ ಜಲ ಜೀವನ್ ಮಿಷನ್ ಯೋಜನೆಯಡಿ ಹಲವು ಮನೆಗಳಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ಟ್ಯಾಪ್ ಹಾಕಿ 9 ತಿಂಗಳು ಕಳೆದರೂ ನೀರಿನ ಸಂಪರ್ಕ ಬಂದಿಲ್ಲ.
- ನಲ್ಲಿ ಹಾಕಿ ಪೋಟೋ ಹೊಡೆದು ಹೋದರೂ ನೀರು ಕೊಟ್ಟಿಲ್ಲ ಹಗಲವಳ್ಳಿ ಹಳ್ಳಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯಿದೆ. ಬೋರ್ ಕೊರೆದು ಮಿಷನ್ ಹಾಕಿ ನೀರು ಕೊಡುತ್ತಿದ್ದು, ಬೋರ್ ವೆಲ್ ಆಗಾಗ ಕೆಟ್ಟುಹೋಗಿ ಸಮಸ್ಯೆಯಾಗುತ್ತಿದೆ.
- ಶಾಶ್ವತ ನೀರು ಪೂರೈಕೆಗೆ ಒಂದು ಕಿ.ಮೀ ದೂರದಲ್ಲಿ ತುಂಗಾ ನದಿಯಿದ್ದರೂ ಗ್ರಾಮ ಪಂಚಾಯಿತಿ ಯೋಜನೆ ಹೆಸರಿನಲ್ಲಿ ದುಡ್ಡು ಮಾಡುತ್ತಿದೆ ಎಂದು ಆರೋಪಿಯಾಗಿತ್ತು.
READ | 23 ಕ್ರಿಮಿನಲ್ಗಳ ಗಡಿಪಾರಿಗೆ ಲಿಸ್ಟ್ ರೆಡಿ, ಶಿವಮೊಗ್ಗದಲ್ಲಿ ಶೀಘ್ರವೇ ಗೂಂಡಾ ಕಾಯ್ದೆ ಜಾರಿ
ಆರೋಪಗಳ ಸತ್ಯಾಸತ್ಯತೆ ಪರಿಶೀಲನೆಗೆ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಉಪ ಕಾರ್ಯದರ್ಶಿ(ಆಡಳಿತ), ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಿರಿಯ ಎಂಜಿನಿಯರ್, ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಪಿಡಿಓ ಕುಡುಮಲ್ಲಿಗೆ ಗ್ರಾಪಂ ವ್ಯಾಪ್ತಿಯ ಹುಗಲವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಗಿ ಕೃಷ್ಣಭಟ್, ಯುವರಾಜ, ಅರುಣಾ ತೇಜಪ್ಪಶೆಟ್ಟಿ, ಲಲಿತಾ ಮಂಜಪ್ಪ, ಜಯರಾಮ, ಕೃಷ್ಣಮೂರ್ತಿ ಶಿವಣ್ಣ, ಗುರುಭಟ್ ಮತ್ತು ಪಂಚದುರ್ಗ ಪರಮೇಶ್ವರ ದೇವಸ್ಥಾನಗಳಿಗೆ IIITC ಗಳನ್ನು ಅಳವಡಿಸಿದ್ದು ನಲ್ಲಿಗಳಿಗೆ ನೀರಿನ ಸಂಪರ್ಕ ಕಲ್ಪಿಸಿರುವುದಿಲ್ಲ. ಕೆಲವು ಮನೆಗಳಿಗೆ ಮುಖ್ಯ ನೀರು ಸರಬರಾಜು ಪೈಪ್ ಲೈನ್ ನಿಂದ FHTC ವರೆಗೆ ಪೈಪ್ ಲೈನ್ ಮಾಡದೇ ಆಪೂರ್ಣಗೊಳಿಸಿರುವುದು ಕಂಡುಬಂದಿರುತ್ತದೆ.
ಈ ಬಗ್ಗೆ ಮುರುಗೇಶ್ ಅವರಿಗೆ ವಿಚಾರಿಸಲಾಗಿದೆ ಅವರು ನೀರಿನ ಸಂಪರ್ಕ ಕಲ್ಪಿಸದಿರುವ ಬಗ್ಗೆ ಮಾಹಿತಿ ನೀಡುವಲ್ಲಿ ವಿಫಲರಾಗಿರುತ್ತಾರೆ.
Police Firing | 10 ದಿನಗಳಲ್ಲಿ ಎರಡನೇ ಫೈರಿಂಗ್, ಕ್ರಿಮಿನಲ್ಗಳ ಚಳಿ ಬಿಡಿಸುತ್ತಿರುವ ಪೊಲೀಸ್ ಇಲಾಖೆ