ಸುದ್ದಿ ಕಣಜ.ಕಾಂ ಸಾಗರ
SAGAR: ತಾಲೂಕಿನ ಮುರಳ್ಳಿ ಮರಾಠಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೊಬೈಲ್ ಚಾರ್ಜ್ ಮಾಡಿಕೊಳ್ಳುವುದಕ್ಕಾಗಿ ತಿಮ್ಮಪ್ಪ ಎಂಬುವವರ ಮನೆಗೆ ಬಂದಿದ್ದು, ಈ ವಿಚಾರವಾಗಿ ನಡರದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಪ್ರಕರಣದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
READ | ರಕ್ತದೊತ್ತಡ ಹೆಚ್ಚಾಗಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ದೊಣ್ಣೆಯಿಂದ ಹಲ್ಲೆ, ಚಿಕಿತ್ಸೆ ಫಲಿಸದೇ ಸಾವು
ಸಿದ್ದಪ್ಪ (57) ಎಂಬುವವರು ತಿಮ್ಮಪ್ಪ(52)ನ ಮನೆಗೆ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಬಂದಿದ್ದು, ಈ ವಿಚಾರದಲ್ಲಿ ಸಿದ್ದಪ್ಪನು ತಿಮ್ಮಪ್ಪ ಮತ್ತು ಆತನ ಹೆಂಡತಿ ಲಕ್ಷ್ಮೀಯೊಂದಿಗೆ ಗಲಾಟೆ ಮಾಡಿ ನಂತರ ಅಲ್ಲೆ ಇದ್ದ ದೊಣ್ಣೆಯನ್ನು ತೆಗೆದುಕೊಂಡು ಮನೆಗೆ ಅಳವಡಿಸಿದ ಡಿಶ್ ಬುಟ್ಟಿಗೆ ದೊಣ್ಣೆಯಿಂದ ಹೊಡೆಯುತ್ತಿದ್ದಾಗ, ಯಾಕೆ ಹೊಡಿತಿಯಾ ಎಂದು ಕೇಳಿದ್ದಕ್ಕೆ ತಿಮ್ಮಪ್ಪನಿಗೆ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಎಡಗಣ್ಣಿನ ಹುಬ್ಬಿಗೆ ಹೊಡೆದು ಗಾಯ ಪಡಿಸಿದ್ದನು. ಚಿಕಿತ್ಸೆ ಸಂಬಂಧ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಆದರೆ, ತಿಮ್ಮಪ್ಪನು ಚಿಕಿತ್ಸೆಗೆ ಫಲಕಾರಿಯಾಗದೇ ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆಂದು ಆತನ ಪತ್ನಿ ನೀಡಿದ ದೂರಿನ ಮೇರೆಗೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿ ಬಂಧನ
ಸಾಗರ ಉಪ ವಿಭಾಗ ಎಎಸ್’ಪಿ ನೇತೃತ್ವದಲ್ಲಿ ಸಿಪಿಐ ಕಾರ್ಗಲ್ ವೃತ್ತ, ಸಾಗರ ಟೌನ್ ಪಿಐ ಮತ್ತು ಸಿಬ್ಬಂದಿ ತಂಡವು ಪ್ರಕರಣದ ತನಿಖೆ ಕೈಗೊಂಡು, ಆರೋಪಿ ಮುರಳಿ ಮರಾಠಿ ಗ್ರಾಮದ ಸಿದ್ದಪ್ಪ ಅಲಿಯಾಸ್ ಸಿದ್ಧ(38) ಎಂಬಾತನನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ.