ಸುದ್ದಿ ಕಣಜ.ಕಾಂ ಸಾಗರ(Sagar)
ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಅಡಿಕೆ(arecanut)ಗೆ ಕ್ಯಾಸ್ವಾಳ(ಕೆಂದಳಿಲು) ಕಾಟ ಶುರುವಾಗಿದ್ದು, ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು ಈಗಾಗಲೇ ಎಲೆಚುಕ್ಕೆ ರೋಗ, ಚಿಗುರು ಅಡಿಕೆಯನ್ನು ಮಂಗಗಳು ಚೀಪಿ ಎಸೆಯುವುದು ಹೀಗೆ ಹಲವು ಸಂಕಷ್ಟಗಳ ನಡುವೆ ಕ್ಯಾಸ್ವಾಳ ಎಂಬ ಜೀವಿಯ ಕಾಟ ರೈತರನ್ನು ಹೈರಾಣ ಮಾಡಿದೆ.
READ | ಭಾರತ್ ಸಿನೆಮಾಸ್ನಲ್ಲಿ ಕುಟುಂಬದೊಂದಿಗೆ ಗಂಧದ ಗುಡಿ ವೀಕ್ಷಿಸಿದ ಬಿ.ಎಸ್.ಯಡಿಯೂರಪ್ಪ, ಸೆಲ್ಫಿಗಾಗಿ ಮುಗಿಬಿದ್ದ ಜನ
ಒಂದೇ ದಿನದಲ್ಲಿ ಎರಡು ಕ್ವಿಂಟಾಲ್’ಗೂ ಹೆಚ್ಚು ಅಡಿಕೆ ಹಾನಿ
ತಾಳಗುಪ್ಪ ಸಮೀಪದ ಹಿರೇಮನೆಯ ಮಧುಕರ್ ಮರಿ ಎಂಬುವವರ ತೋಟದಲ್ಲಿ ಕ್ಯಾಸ್ವಾಳ ಕಾಟ ಕಂಡುಬಂದಿದ್ದು, ಅಡಿಕೆಗಳನ್ನು ಕಚ್ಚಿ ಎಸೆದಿದೆ. ಇವರ ತೊಟದಲ್ಲಿ ಕ್ಯಾಸ್ವಾಳವು ಸುಮಾರು ಎರಡು ಕ್ವಿಂಟಾಲ್’ಗೂ ಅಧಿಕ ಅಡಿಕೆಯನ್ನು ತಿಂದು ಎಸೆದಿದೆ. ಒಂದು ಅಂದಾಜಿನ ಪ್ರಕಾರ, ಒಂದು ಕ್ಯಾಸ್ವಾಳ ನಿತ್ಯ ಐದು ಗೊನೆ ಅಡಿಕೆ ಗೊನೆಗಳನ್ನು ನಾಶ ಮಾಡಬಲ್ಲದು. ಅಡಿಕೆಯ ಸಿಹಿ ಭಾಗವನ್ನು ಮಾತ್ರ ತಿನ್ನುತ್ತದೆ. ಕ್ಯಾಸ್ವಾಳ ಒಂದೊಂದೇ ತೋಡಗಳಿಗೆ ಲಗ್ಗೆ ಇಡುತ್ತವೆ. ಮಂಗಗಳದರೂ ಮರದಲ್ಲಿದ್ದರೆ ಕಾಣಿಸುತ್ತವೆ. ಹೀಗಾಗಿ, ಸುಲಭವಾಗಿ ಅವುಗಳನ್ನು ಓಡಿಸಬಹುದು. ಆದರೆ, ಕ್ಯಾಸ್ವಾಳ ಹಾಗಲ್ಲ. ಅವುಗಳನ್ನು ಓಡಿಸುವುದು ಕಷ್ಟ.