ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾ ತರಬೇತಿ ಕೇಂದ್ರದಲ್ಲಿ ನವೆಂಬರ್ 16 ರಿಂದ 18ರ ವರೆಗೆ ವಿವಿಧ ಇಲಾಖೆಯ ಸಿಬ್ಬಂದಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರಿಗೆ ಪ್ರಥಮ ಪ್ರತಿಕ್ರಿಯಾ ತರಬೇತಿ(ಫಸ್ಟ್ ರೆಸ್ಪಾಂಡರ್ ಟ್ರೈನಿಂಗ್) ಏರ್ಪಡಿಸಲಾಗಿತ್ತು.
ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಡಾ.ವಿಕ್ರಮ ಆಮ್ಟೆ, ಅಪಾಯ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯಂತಹ ಕ್ರಮಗಳನ್ನು ಕೈಗೊಳ್ಳುವುದರಿಂದ ಸಂಭವಿಸಬಹುದಾದ ವಿಪತ್ತನ್ನು ತಡೆಗಟ್ಟಬಹುದು. ಹೃದಯಾಘಾತವಾದ ಒಂದು ಗಂಟೆಯೊಳಗೆ ಪ್ರಥಮ ಚಿಕಿತ್ಸೆ ಮಾಡಿದರೆ ವ್ಯಕ್ತಿಯ ಜೀವವನ್ನು ಉಳಿಸಬಹುದು. ಈ ಸಮಯವನ್ನು ‘ಗೋಲ್ಡನ್ ಅವರ್ ಎನ್ನುತ್ತಾರೆ ಎಂದು ಸಲಹೆ ನೀಡಿದರು.
READ | ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ 22 ಲಕ್ಷ ರೂ. ಮೋಸ
ಚಿಕಿತ್ಸೆಯ ವಿವಿಧ ವಿಧಾನಗಳ ಬಗ್ಗೆ ತರಬೇತಿ
ಒಂದು ಜೀವ ಉಳಿಸಬಹುದಾದ, ವಿಪತ್ತಿನಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆಯ ವಿವಿಧ ವಿಧಾನಗಳ ಬಗ್ಗೆ ಈ ತರಬೇತಿ ಶಿಬಿರದಲ್ಲಿ ತಿಳಿಸಿಕೊಡಲಾಗುತ್ತದೆ.ಪ್ರಶಿಕ್ಷಣಾರ್ಥಿಗಳು ಈ ಬಗ್ಗೆ ಆಸಕ್ತಿಯಿಂದ ತರಬೇತಿ ಪಡೆದು, ತಮ್ಮ ದಿನನಿತ್ಯದ ಕರ್ತವ್ಯಗಳಲ್ಲಿ ಈ ಪರಿಹಾರ ಕ್ರಮಗಳನ್ನು ಅನುಸರಿಸಬೇಕು ಎಂದ ಅವರು ಇದೊಂದು ಉತ್ತಮ ತರಬೇತಿಯಾಗಿದೆ ಎಂದರು.
ಟ್ರೈನಿಂಗ್ ನಿಂದ ಎಲ್ಲರಿಗೂ ಪ್ರಯೋಜನ
ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಎಸ್.ಕೆ.ಕಿರಣ್ ಮಾತನಾಡಿ, ನಮ್ಮ ತರಬೇತಿ ಕೇಂದ್ರದಿಂದ ಏರ್ಪಡಿಸಿರುವ ಪ್ರಥಮ ಪ್ರತಿಕ್ರಿಯಾ ತರಬೇತಿಯು ವಿವಿಧ ಇಲಾಖೆಗಳ ಸಿಬ್ಬಂದಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಗೃಹ ರಕ್ಷಕ ದಳದ ಸದಸ್ಯರು, ಡ್ರೈವರ್ ಮತ್ತು ಕಂಡಕ್ಟರ್’ಗಳು, ಕ್ರೀಡಾ ತರಬೇತಿದಾರರು ಇವರೆಲ್ಲರಿಗೂ ಬಹಳ ಉಪಯುಕ್ತವಾಗಿದೆ. ಅವರವರ ಕರ್ತವ್ಯದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವಾಗ, ಆಗಬಹುದಾದ ಅಪಾಯಕರ ಹಾಗೂ ಜೀವ ಹಾನಿಯಂತಹ ಘಟನೆಗಳನ್ನು ಸುಗಮವಾಗಿ ನಿರ್ವಹಿಸಲು ಅತಿ ಉಪಯುಕ್ತವಾಗಿದೆ. ನಾವೆಲ್ಲರು ಒಂದಲ್ಲ ಒಂದು ರೀತಿಯಲ್ಲಿ ಇತಂಹ ಘಟನೆಗಳನ್ನು ನೋಡುತ್ತಿದ್ದು ಪರಿಹಾರ ವಿಧಾನಗಳ ಬಗ್ಗೆ ತಿಳಿದುಕೊಂಡಿದ್ದರೆ ಅಂತಹ ಸಮಯದಲ್ಲಿ ಅಮೂಲ್ಯವಾದ ಜೀವವನ್ನು ಉಳಿಸಬಹುದು ಎಂದು ಹೇಳಿದರು.
ವೈದ್ಯಾಧಿಕಾರಿಗಳಾದ ಡಾ.ವಿನಯ್, ದೀಕ್ಷಿತ್ ಮತ್ತು ಗೀತಾ ನಿಂಬಾಳ ತರಬೇತುದಾರರಾಗಿ 3 ದಿನಗಳ ತರಬೇತಿಯಲ್ಲಿ ಕಾರ್ಯ ನಿರ್ವಹಿಸಿದರು. 180 ಜನರು ತರಬೇತಿ ಪಡೆದುಕೊಂಡರು.