ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅನ್ನ ನೀಡುತ್ತಿದ್ದ ಭೂಮಿಯನ್ನು ಚಿನ್ನದ ಮೋಹಕ್ಕೆ ಬಿದ್ದು ಮಾರಾಟ ಮಾಡಿ ಕುಟುಂಬವೊಂದು ಬೀದಿಗೆ ಬಿದ್ದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಗಲಕೋಟೆ (bagalkot) ಜಿಲ್ಲೆಯ ಮಹಾಲಿಂಗಾಪುರ (Mahalingapura) ಗ್ರಾಮದ ದಂಪತಿ ಮೋಸ ಹೋಗಿದ್ದಾರೆ. ಆಗಸ್ಟ್ 24ರಂದು ಹೊಳೆಹೊನ್ನೂರು (Holehonnur) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
READ | ಭದ್ರಾವತಿ ಸ್ವಚ್ಛತಾ ರಾಯಭಾರಿ ನಟಿ ಆಶಾ ಭಟ್ ಐರನ್ ಸಿಟಿಗೆ ಇಂದು ಭೇಟಿ
ದಂಪತಿ ಮೋಸ ಹೋಗಿದ್ದು ಹೇಗೆ?
ಈ ಪ್ರಕರಣದಲ್ಲಿ ಮೋಸ ಹೋಗಿರುವ ಮಹಾಲಿಂಗಾಪುರದ ವ್ಯಕ್ತಿಯು ಪ್ರವಾಸ(Tour)ಕ್ಕೆ ಹೋದಾಗ ವಂಚಕರ ಪರಿಚಯವಾಗಿತ್ತು. ಆಗಲೇ ಪರಸ್ಪರ ಮೊಬೈಲ್ ಸಂಖ್ಯೆಯನ್ನೂ ಪರಸ್ಪರ ವಿನಿಮಯ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಮೊಬೈಲಿಗೆ ಕರೆ ಮಾಡಿ ತಮ್ಮ ಅಜ್ಜಿಗೆ ಎಂಟು ಕೆಜಿ ಚಿನ್ನದ ನಾಣ್ಯಗಳು ಸಿಕ್ಕಿವೆ. ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇವೆಂದು ಹೇಳಿದ್ದ. ಇದಕ್ಕಾಗಿ ₹20 ಲಕ್ಷ ನೀಡುವಂತೆ ಕೋರಿದ್ದ.
ವಂಚಕರಿಂದ ನಕಲಿ- ಅಸಲಿಯ ಆಟ
ತಕ್ಷಣ ದಂಪತಿ ಆತನ ಮಾತುಗಳಿಗೆ ನಂಬಿಲ್ಲ. ಹೀಗಾಗಿ, ಆಗಸ್ಟ್ 15ರಂದು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೇಟಿ ಆಗುವಂತೆ ತಿಳಿಸಿದ್ದ. ಅದನ್ನು ನಂಬಿದ ದಂಪತಿ ಆಗಮಿಸಿದ್ದರು. ಇವರಿಗೆ ವಂಚಕರು ಮೊದಲು ಎರಡು ಚಿನ್ನದ ನಾಣ್ಯಗಳನ್ನು ನೀಡಿದ್ದರು. ಬೇಕಿದ್ದ ಇದನ್ನು ಅಂಗಡಿಯಲ್ಲಿ ಪರಿಶೀಲನೆ ಮಾಡಿಸುವಂತೆ ತಿಳಿಸಿದ್ದಾರೆ. ಅದರಂತೆ, ಬಂಗಾರದಂಡಿಗೆ ಹೋಗಿ ಪರೀಕ್ಷಿಸಿದಾಗ ಅವು ಅಸಲಿ ಚಿನ್ನದ ನಾಣ್ಯಗಳಾಗಿದ್ದವು. ಇದರಿಂದ ದಂಪತಿಗೆ ಭರವಸೆ ಬಂದಿದೆ. ಹೇಗಾದರೂ ಮಾಡಿ ಚಿನ್ನದ ನಾಣ್ಯಗಳನ್ನು ಖರೀದಿಸಬೇಕೆಂದುಕೊಂಡು ತಮ್ಮ ಊರಿನಲ್ಲಿದ್ದ ಜಮೀನು ಮಾರಾಟ ಮಾಡಿ ಆಗಸ್ಟ್ 24ರಂದು ₹20 ಲಕ್ಷ ನೀಡಿ ನಾಲ್ಕೈದು ನಾಣ್ಯಗಳನ್ನು ನೀಡಿದ್ದಾರೆ. ಇನ್ನುಳಿದ ನಾಣ್ಯಗಳನ್ನು ತರುವುದಾಗಿ ಹೇಳಿಹೋದವರು ವಾಪಸ್ ಬಂದಿಲ್ಲ. ನಾಣ್ಯಗಳನ್ನು ಪರೀಕ್ಷಿಸಿದಾಗ ನಕಲಿ ಇರುವುದು ಗಮನಕ್ಕೆ ಬಂದಿದೆ. ಸಂಬಂಧಪಟ್ಟವರಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಈ ಸಂಬಂಧ ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆಸಲಾಗುತ್ತಿದೆ.
Night rounds | ಚುಮುಚುಮು ಚಳಿಯಲ್ಲೇ ಪಾಲಿಕೆ ಆಯುಕ್ತರಿಂದ ಬೈಕಿನಲ್ಲೇ ನೈಟ್ ರೌಂಡ್ಸ್, ತೆರವು ಕಾರ್ಯಾಚರಣೆ ವೀಕ್ಷಣೆ