ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಯನಗರ ಪೊಲೀಸರು ಒಂದು ಮೊಬೈಲ್ ಸುಲಿಗೆ ಪ್ರಕರಣದ ತನಿಖೆ ಕೈಗೊಂಡಿದ್ದು, ಒಬ್ಬ ಆರೋಪಿ ಪತ್ತೆಯಾಗಿದ್ದು, ಆತ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.
ಕಾಶಿಪುರದ ಪ್ರಜ್ವಲ್ ಆರ್ ಅಲಿಯಾಸ್ ಪ್ರಜ್ಜು(21) ಎಂಬಾತನನ್ನು ಬಂಧಿಸಲಾಗಿದೆ. ಈತನೊಂದಿಗೆ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
READ | ಶಿವಮೊಗ್ಗ ನಗರ, ತಾಲೂಕಿನ ಕೆಲವೆಡೆ ಮೂರು ದಿನ ಕರೆಂಟ್ ಇರಲ್ಲ
ಜಯನಗರ ಪೊಲೀಸರ ಭರ್ಜರಿ ಬೇಟೆ
ನವೆಂಬರ್ 5ರಂದು ಸಂಜೆ ನಗರದ ಚನ್ನಪ್ಪ ಲೇಔಟ್ ಮುಖ್ಯ ರಸ್ತೆಯಲ್ಲಿ ಶರತ್ ಎಂಬುವವರ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಹೋದ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು.
ಜಯನಗರ ಪೊಲೀಸ್ ಠಾಣೆ ಪಿಐ, ಪಿಎಸ್ಐ ಮತ್ತು ಸಿಬ್ಬಂದಿ ತಂಡವು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿತರಿಂದ ಜಯನಗರ ಪೊಲೀಸ್ ಠಾಣೆಯ 1 ಸುಲಿಗೆ, 1 ಮೊಬೈಲ್ ಕಳ್ಳತನ ಮತ್ತು 2 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಸೇರಿ ಒಟ್ಟು 4 ಪ್ರಕರಣಗಳಿಗೆ ಸಂಬಂಧಿಸಿದ ₹1,71 ಲಕ್ಷ ಮೌಲ್ಯದ 7 ಮೊಬೈಲ್ ಫೋನ್ ಗಳು ಮತ್ತು 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.