ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶರಾವತಿ ಮುಳುಗಡೆ ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಾದ ರಾಜ್ಯ ಸರ್ಕಾರ (Karnataa\ka government) ಸಂತ್ರಸ್ತರ ಬುಡಕ್ಕೆ ಕೈಹಾಕುವ ಮೂಲಕ ಜೇನಿನ ಗೂಡಿಗೆ ಕೈಹಾಕುವ ಕೆಲಸ ಮಾಡಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ (Madhu Bangarappa) ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿ(Congress Office)ಯಲ್ಲಿ ಶುಕ್ರವಾರ ಮಾತನಾಡಿದ ಅವರು, ನಾಡಿಗೆ ಬೆಳಕು ಕೊಟ್ಟವರನ್ನು ಬೀದಿಗೆ ತಂದು ನಿಲ್ಲಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಈ ಮೂಲಕ ತಮ್ಮ ಅಂತ್ಯಕ್ಕೆ ತಾವೇ ನಾಂದಿ ಹಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
READ | ಶಿವಮೊಗ್ಗದಲ್ಲಿ ಆಪರೇಷನ್ ಬುಲ್ಡೋಜರ್, ಎಲ್ಲೆಲ್ಲಿ ತೆರವು ಕಾರ್ಯಾಚರಣೆ?, ಜನಾಭಿಮತ ಇಲ್ಲಿದೆ
ಧಂ ಇಲ್ಲದಿದ್ದರೆ ಆಡಳಿತದಿಂದ ಕೆಳಗಿಳಿಯಿರಿ
ಮುಖ್ಯಮಂತ್ರಿ ಅವರು ಈ ಹಿಂದೆ ಶಿವಮೊಗ್ಗ(shimoga)ಕ್ಕೆ ಭೇಟಿ ನೀಡಿದಾಗ ಬಗರ್ ಹುಕುಂ (bagar hukum) ಸಾಗುವಳಿದಾರರ ತೊಂದರೆಗಳಿಗೆ ಪರಿಹಾರ ನೀಡುವುದಾಗಿ ತಿಳಿಸಿದ್ದರು. ಆದರೆ, ಬಿಜೆಪಿಯ ಅಧಿಕಾರ ಅವಧಿಯಲ್ಲೇ ಮುಳುಗಡೆ ಸಂತ್ರಸ್ತರ ವಿರುದ್ಧವಾದ ಆದೇಶ ಮಾಡಲಾಗಿದೆ. ಒಂದುವೇಳೆ, ಸಮಸ್ಯೆಗಳನ್ನು ಬಗೆಹರಿಸುವ ಧಂ ಇಲ್ಲದಿದ್ದರೆ ಅಧಿಕಾರದಿಂದ ಕೆಳಗಿಳಿಯಿರಿ. ನಾವು ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ ಎಂದು ಹೇಳಿದರು.
ಶಿವಮೊಗ್ಗ ತಾಲ್ಲೂಕಿನ ಕೂಡಿ, ಕೂರಂಬಳ್ಳಿಯ ಎರಡು ಸರ್ವೆ ನಂಬರ್’ಗಳಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಹೈಕೋರ್ಟ್ ಕೇಂದ್ರದ ಅನುಮತಿ ಪಡೆದಿಲ್ಲವೆಂದು ಹೇಳಿದೆ. ಆದರೆ, ಸರ್ಕಾರ 56 ಡಿನೋಟಿಫಿಕೇಶನ್ ಖುಲ್ಲಾ ಮಾಡಿದೆ. ಇದಕ್ಕೆ ನೇರ ಕಾರಣ ಸೊರಬ ಹಾಗೂ ಸಾಗರ ಶಾಸಕರು. ಸಂತ್ರಸ್ತರ ಪರವಾಗಿ ನಿಲ್ಲದೇ ಇರುವುದರಿಂದಾಗಿ ಈ ಸಂಕಷ್ಟ ಎದುರಾಗಿದೆ.
| ಮಧು ಬಂಗಾರಪ್ಪ, ಮಾಜಿ ಶಾಸಕ
ಸಂತ್ರಸ್ತರ ಪರವಾಗಿ ಸರ್ಕಾರ ನಿಲ್ಲದೇ ಇರುವುದರಿಂದ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಇದಕ್ಕಾಗಿ ಶೀಘ್ರವೇ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
READ | ಮಲೆನಾಡಿನಲ್ಲಿ ಅಡಿಕೆಗೆ ಕ್ಯಾಸ್ವಾಳ ಕಾಟ, ಅಡಿಕೆ ಬೆಳೆಗಾರರು ಕಂಗಾಲು
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಅಡಿಕೆ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ, ಪ್ರಮುಖರಾದ ಎನ್.ಪಿ. ಧರ್ಮರಾಜ್, ರಮೇಶ್ ಶಂಕರಘಟ್ಟ, ಜಿ.ಡಿ. ಮಂಜುನಾಥ್, ಚಂದ್ರಭೂಪಾಲ್, ರಮೇಶ್ ಇಕ್ಕೇರಿ, ವಿಜಯಕುಮಾರ್, ಚಂದ್ರಶೇಖರ್, ಹೆಚ್.ಆರ್. ಮಹೇಂದ್ರ ಮತ್ತಿತರರು ಇದ್ದರು.