ಸುದ್ದಿ ಕಣಜ.ಕಾಂ ಹೊಸನಗರ
HOSANAGAR: ವ್ಯಕ್ತಿಯೊಬ್ಬರು ರಕ್ತದೊತ್ತಡ (ಬಿಪಿ) ಹೆಚ್ಚಳವಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮುಂಬಾರು ಗ್ರಾಮದಲ್ಲಿ ನಡೆದಿದೆ.
ಮುಂಬಾರು ಗ್ರಾಮದ ರಮೇಶ್(48) ಎಂಬುವವರು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಕಾರು ವಾಷಿಂಗ್ ಮಾಡುವ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ರಕ್ತದೊತ್ತಡ ಹೆಚ್ಚಿರುವುದು ಗಮನಕ್ಕೆ ಬಂದಿದ್ದು, ಇದರಿಂದ ಅತಿಯಾಗಿ ಬೇಸರವಾಗಿದ್ದು, ಯಾರೊಂದಿಗೆ ಸೇರುತ್ತಿರಲಿಲ್ಲ. ಮಾತಾಡುತ್ತಿರಲಿಲ್ಲ. ಕೈಗೆ ಗಾಯವಾಗಿದ್ದರಿಂದ ಕಳೆದ ಮೂರು ದಿನಗಳಿಂದ ಕೆಲಸಕ್ಕೂ ಹೋಗಿರಲಿಲ್ಲ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪತ್ನಿಯು ದೂರು ನೀಡಿದ್ದು, ಅದರನ್ವಯ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
READ | ಉದ್ಯೋಗ ಹುಡುಕಾಟದಲ್ಲಿದ್ದೀರಾ? ಇಲ್ಲಿದೆ ಎಲ್ಲ ಉದ್ಯೋಗಗಳ ಒಂದೇ ಪೋರ್ಟಲ್, ಒಂದು ವೇದಿಕೆಯಲ್ಲಿ ನೂರಾರು ಕಂಪೆನಿ