ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಇಡೀ ದಿನ ಶಿವಮೊಗ್ಗ ಜಿಲ್ಲೆಯಾದ್ಯಂತ ಹಲವು ಘಟನೆಗಳು ನಡೆದಿವೆ. ಆದರೆ, ಓದುಗರು ಅವುಗಳನ್ನು ಮಿಸ್ ಮಾಡಿಕೊಂಡಿದ್ದಲ್ಲಿ ಅವರಿಗೆ ಸುದ್ದಿ ತಲುಪಿಸುವುದಕ್ಕಾಗಿ ‘ಸುದ್ದಿ ಕಣಜ’ವು ಟಾಪ್ 10 ಸುದ್ದಿಗಳ ಬುತ್ತಿಯನ್ನು ನೀಡುತ್ತಿದೆ.
ಶನಿವಾರ ಕೂಡ ಹಲವು ಘಟನೆಗಳು ನಡೆದಿವೆ. ಮಲೆನಾಡಿನ ಸಮಸ್ಯೆಗಳ ಅಧ್ಯಯನಕ್ಕೆ ಕೆಪಿಸಿಸಿಯಿಂದ “ಮಲೆನಾಡಿನ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿ”ಯನ್ನು ರಚಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ. ಇತ್ತೀಚೆಗೆ, ಬಿಎಚ್.ರಸ್ತೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಒಬ್ಬನಿಗೆ ಬಂಧಿಸಲು ಹೋದಾಗ ಫೈರಿಂಗ್ ಆಗಿದೆ. ಭಾನುವಾರ ಟಿಇಟಿ ಪರೀಕ್ಷೆ ನಡೆಯಲಿದ್ದು, ಯಾವ ಗುರುತಿನ ಚೀಟಿ ತರಬೇಕೆಂದು ಡಿಡಿಪಿಐ ಸೂಚನೆ ನೀಡಿದ್ದಾರೆ. 23 ರೌಡಿಗಳ ಗಡಿಪಾರಿಗೆ ಪಟ್ಟಿ ಸಿದ್ಧವಾಗಿದ್ದು, ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಶಿಕಾರಿಪುರದಲ್ಲಿ ವಿಜಯೇಂದ್ರ ಜನ್ಮದಿನ ಆಚರಿಸಿದ್ದು, ಅವರ ಪರ ಘೋಷಣೆ ಕೂಗಿದ ಅಭಿಮಾನಿಗಳು ” ಭಾವಿ ಎಂಎಲ್.ಎ.” ಎಂದು ಘೋಷಿಸಿದ್ದು ವಿಶೇಷವಾಗಿತ್ತು. ಹೀಗಾಗಿ, ವಿವಿಧ ಕ್ಷೇತ್ರದ ಸುದ್ದಿಗಳ ಬುತ್ತಿ ಇಲ್ಲಿದೆ…
NEWS 1 | ಅಡಿಕೆ ಸೇರಿ ಮಲೆನಾಡು ರೈತರ ಸಮಸ್ಯೆಗಳ ಅಧ್ಯಯನಕ್ಕೆ ರಾಜ್ಯಮಟ್ಟದ ಸಮಿತಿ ರಚನೆ, 15 ದಿನಗಳ ಡೆಡ್ಲೈನ್
NEWS 2 | ಬಿ.ಎಚ್.ರಸ್ತೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಆರೋಪಿ ಅರೆಸ್ಟ್
NEWS 3 | ಕಾಂಗ್ರೆಸ್’ನವರಿಗೆ ಶಿವಮೊಗ್ಗ ಜಿಲ್ಲೆಯ ಇತಿಹಾಸವೇ ಗೊತ್ತಿಲ್ಲ, ಚನ್ನಿ ಟಾಂಗ್
NEWS 4 | 10 ದಿನಗಳಲ್ಲಿ ಎರಡನೇ ಫೈರಿಂಗ್, ಕ್ರಿಮಿನಲ್ಗಳ ಚಳಿ ಬಿಡಿಸುತ್ತಿರುವ ಪೊಲೀಸ್ ಇಲಾಖೆ
NEWS 5 | ನಾಳೆ ನಡೆಯಲಿರುವ ಟಿಇಟಿ ಪರೀಕ್ಷೆಗೆ ಗುರುತಿನ ಚೀಟಿ ಕಡ್ಡಾಯ, ಯಾವೆಲ್ಲ ಚೀಟಿ ತರಬಹುದು?
NEWS 6 | ಆಶ್ರಯ ಜಿ+2 ಮಾದರಿ ಮನೆಗಳಿಗೆ ಅರ್ಜಿ ಆಹ್ವಾನ, ಮಹಿಳೆಯರಿಗಷ್ಟೇ ಅವಕಾಶ, ಪುರುಷರಿಗೆ ಹಲವು ಷರತ್ತು
NEWS 7 | 23 ಕ್ರಿಮಿನಲ್ಗಳ ಗಡಿಪಾರಿಗೆ ಲಿಸ್ಟ್ ರೆಡಿ, ಶಿವಮೊಗ್ಗದಲ್ಲಿ ಶೀಘ್ರವೇ ಗೂಂಡಾ ಕಾಯ್ದೆ ಜಾರಿ
NEWS 8 | ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಎಷ್ಟಿದೆ?
NEWS 9 | ಶಿಕಾರಿಪುರ ಸಾರ್ವಜನಿಕ ಸಭೆಯಲ್ಲೇ ವಿಜಯೇಂದ್ರಗೆ ‘ಭಾವಿ ಎಂಎಲ್ಎ’ ಎಂದು ಘೋಷಿಸಿದ ಜನಸ್ತೋಮ
NEWS 10 | ಪುರದಾಳು ಸುತ್ತಮುತ್ತ ಭಾನುವಾರ ಕರೆಂಟ್ ಇರಲ್ಲ