ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ತರೀಕೆರೆ ರಸ್ತೆಯಲ್ಲಿರುವ ಗಾಂಧಿ ವೃತ್ತದಲ್ಲಿ ಭಾನುವಾರ ರಾತ್ರಿ ಕಲ್ಲು ತೂರಾಟ ಹಾಗೂ ಚಾಕು ಇರಿತದ ಎರಡು ಪ್ರತ್ಯೇಕ ಘಟನೆಗಳು ನಡೆದಿದ್ದು, ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ 1- ಕಲ್ಲು ತೂರಾಟ
ಗೌತಮ್, ಹರೀಶ್ ಹಾಗೂ ಜಹೀರ್ ಅವರು ಸ್ನೇಹಿತರಾಗಿದ್ದು, ಗೌತಮ್ ಎಂಬಾತನ ಸ್ಟೇಟಸ್ ಬಗ್ಗೆ ಕಮೆಂಟ್ ಮಾಡಿದ್ದ ಎನ್ನಲಾಗಿದೆ. ಕಾರಣಕ್ಕಾಗಿ ಪರಸ್ಪರ ಗಲಾಟೆಯಾಗಿದ್ದು, ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ಇಲ್ಲಿ ಯಾವುದೇ ರೀತಿಯ ಕೋಮು ಸಂಘರ್ಷ ಇಲ್ಲ ಎಂದು ಎಸ್ಪಿ ಜಿ.ಕೆ.ಮಿಥುನ್ ಮಾಡಬಹುದು.
READ | ಲೋಕ ಅದಾಲತ್ ನಲ್ಲಿ 46,905 ಪ್ರಕರಣಗಳು ಇತ್ಯರ್ಥ, ಎಲ್ಲಿ ಎಷ್ಟು ಪೀಠ?
ಪ್ರಕರಣ 2- ಚಾಕು ಇರಿತ
ಭದ್ರಾವತಿಯ ಸರ್ಕಾರ ಆಸ್ಪತ್ರೆ ಸಮೀಪ ರಿಜ್ವಾನ್ ಎಂಬಾತನಿಗೆ ಚಾಕುವಿನಿಂದಚುಚ್ಚಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಬಂದೋಬಸ್ತ್
ಜಿಲ್ಲಾ ಪೊಲೀಸರು ಭದ್ರಾವತಿ ಘಟನೆಯ ಬೆನ್ನಲ್ಲೇ ಜಾಗೃತರಾಗಿದ್ದು, ಶಿವಮೊಗ್ಗ ನಗರದಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಸಲಾಯಿತು. ದಾಳಿಗೆ ಖಚಿತ ಕಾರಣ ತಿಳಿದುಬಂದಿಲ್ಲ. ವಿಚಾರಣೆ ನಡೆಯುತ್ತಿದೆ.