ಸುದ್ದಿ ಕಣಜ.ಕಾಂ ಶಿಕಾರಿಪುರ
SHIKARIPURA: ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R. Selvamani) ಅವರು ಗ್ರಾಮ ವಾಸ್ತವ್ಯದಲ್ಲಿ ಹಲವು ಸ್ಥಳೀಯ ಸಮಸ್ಯೆಗಳಿಗೆ ಫಟಾಫಟ್ ಪರಿಹಾರ ನೀಡಿದರು. ಜನರು ಸಲ್ಲಿಸಿದ ಅಹವಾಲುಗಳನ್ನು ಸ್ವೀಕರಿಸಿ ಅವುಗಳನ್ನು ಪರಿಹರಿಸಿದರು.
ಮಳೂರಿನಲ್ಲಿ ಗೋಶಾಲೆ ಆರಂಭಿಸಬೇಕು ಎಂಬ ಬೇಡಿಕೆಗೆ ಸ್ಪಂದನೆ ನೀಡಿದ ಅವರು, ಸರ್ಕಾರಿ ಜಾಗ ಗುರುತಿಸಲಾಗಿದೆ. ಗೋಶಾಲೆಗೆ ₹1 ಕೋಟಿ ಮಂಜೂರಾಗಿದ್ದು, ಅದನ್ನು ಮಳೂರಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
READ | ಕೆಇಎಯಿಂದ 310 ಹುದ್ದೆಗಳ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಡಿಸಿ ನೀಡಿದ ಸೂಚನೆಗಳಿವು
- ಒಂದು ಕಿ.ಮೀ ವ್ಯಾಪ್ತಿಯಲ್ಲಿ ಇನ್ನೊಂದು ಗ್ರಾಮ ಇರುವುದರಿಂದ ಜಾವಕಟ್ಟೆ ಗ್ರಾಮವನ್ನು ಉಪ ಕಂದಾಯವನ್ನಾಗಿ ಮಾಡಲು ಶಿಫಾರಸು ಮಾಡಲಾಗುವುದು.
- ಮಳೂರಿನಲ್ಲಿ ಶೀಘ್ರವೇ ಬಸ್ ಡಿಪೋ ಆರಂಭಿಸಲಾಗುವುದು. ಈ ಮೂಲಕ ಗ್ರಾಮಸ್ಥರ ಬಸ್ ಸಮಸ್ಯೆ ಬಗೆಹರಿಯಲಿದೆ.
- “ಹೋಬಳಿಗೊಂದು ಕ್ರೀಡಾಂಗಣ ಯೋಜನೆ” ಅಡಿ ಮಳೂರಿಗೊಂದು ಕ್ರೀಡಾಂಗಣ ಬೇಕೆಂದು ಮನವಿ ಸಲ್ಲಿಸಲಾಗಿದೆ. ಜಾಗ ವೀಕ್ಷಿಸಿದ್ದು, ಕೆಲವು ಕಾನೂನು ತೊಡಕುಗಳಿದ್ದು, ಅವುಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಲಾಗುವುದು.
ಡಿಡಿಪಿಐ ಪರಮೇಶ್ವರಪ್ಪ, ಎಡಿಸಿ ಡಾ.ನಾಗೇಂದ್ರ ಹೊನ್ನಳ್ಳಿ, ತಹಶಿಲ್ದಾರ್ ಎಂ.ಪಿ.ಕವಿರಾಜ್, ಬಳ್ಳಿಗಾವಿ ಗ್ರಾಪಂ ಅಧ್ಯಕ್ಷ ಪರಮೇಶ್ವರಪ್ಪ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Arrest | ದೇವಸ್ಥಾನ ಆವರಣದಲ್ಲಿ ಮಹಿಳೆ ಮರ್ಡರ್, ಕುಂದಾಪುರ ಮೂಲದ ವ್ಯಕ್ತಿ ಅರೆಸ್ಟ್