ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಡಿಸೆಂಬರ್ 26 ರಿಂದ ಜನವರಿ 3ರವರೆಗೆ ಮಹಿಳಾ ಕ್ರಿಕೆಟ್ ಹವಾ ಮನೆ ಮಾಡಲಿದೆ. ಇದಕ್ಕೆ ಕಾರಣ ಅಂತರರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ(Women’s Cricket).
ದೇಶೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಬಿಸಿಸಿಐ (Board of Control for Cricket in India) ದೇಶದಲ್ಲಿ 15 ವರ್ಷ ವಯೋಮಿತಿಯ ಮಹಿಳಾ ಕ್ರಿಕೆಟ್ ಆಟಗಾರರಿಗಾಗಿ ಪಂದ್ಯಾವಳಿಯನ್ನು ಆಯೋಜಿಸಿದೆ ಎಂದು ಕೆಎಸ್ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಶಿವಮೊಗ್ಗ ವಲಯ ಸಂಚಾಲಕ ಎಚ್.ಎಸ್.ಸದಾನಂದ್ ಹೇಳಿದರು.
ಪಂದ್ಯಾವಳಿಗಳ ಬಗ್ಗೆ ಮಾಹಿತಿ ನೀಡಲು ನವುಲೆಯ ಕ್ರಿಕೆಟ್ ಕ್ರೀಡಾಂಗಣ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
READ | ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ, ಬುಲ್ಡೋಜರ್ ಅಡಿ ಪುಡಿಪುಡಿಯಾದ ಸೈಲೆನ್ಸರ್, ಹಾರ್ನ್’ಗಳು
ಹೇಗಿರಲಿದೆ ಪಂದ್ಯಾವಳಿ, ಯಾರೆಲ್ಲ ಭಾಗಿ?
ರಾಷ್ಟ್ರದ ವಿವಿಧ ರಾಜ್ಯಗಳ 36 ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ತಲಾ 6 ತಂಡಗಳಂತೆ 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಈ ಪೈಕಿ ‘ಎ’ ಗುಂಪಿನ 6 ತಂಡಗಳ ಪಂದ್ಯಾವಳಿಗಳು ಶಿವಮೊಗ್ಗದ ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮತ್ತು ಜೆಎನ್ಎನ್ಸಿಇ ಟರ್ಫ್ ಅಂಕಣದಲ್ಲಿ ನಡೆಯಲಿವೆ.
‘ಎ’ ಗುಂಪಿನಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರಾಖಂಡ, ವಿದರ್ಭ, ಹಿಮಾಚಲ ಪ್ರದೇಶ, ತ್ರಿಪುರ ರಾಜ್ಯಗಳ ತಂಡಗಳು ಭಾಗವಹಿಸಲಿವೆ. ಈಗಾಗಲೇ ಕ್ರೀಡಾಪಟುಗಳು ನಗರದ ಖಾಸಗಿ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಿವೆ ಎಂದು ತಿಳಿಸಿದರು.
ಕರ್ನಾಟಕದ ಮಹಿಳೆಯರ ತಂಡಕ್ಕೆ ಶಿವಮೊಗ್ಗದಿಂದ 7 ಜನ ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಕರ್ನಾಟಕ ತಂಡ ಬೇರೆ ರಾಜ್ಯದಲ್ಲಿ ಆಡಲಿದ್ದು, ಶಿವಮೊಗ್ಗದ ಶ್ರೀಲಕ್ಷ್ಮೀ ಮತ್ತು ನಿರ್ಮಿತ ಕರ್ನಾಟಕ ತಂಡದಲ್ಲಿ ಭಾಗವಹಿಸಲಿದ್ದಾರೆ
ಡಿ.ಎಸ್.ಅರುಣ್, ಶಿವಮೊಗ್ಗ ವಲಯ ಚೇರ್ಮನ್ ಹಾಗೂ ವಿಧಾನ ಪರಿಷತ್ ಸದಸ್ಯ
ಹೇಗಿರಲಿದೆ ಪಂದ್ಯಾವಳಿ?
- ಪ್ರತಿದಿನ 3 ಪಂದ್ಯಗಳಂತೆ ಒಟ್ಟಾರೆ 15 ಪಂದ್ಯಗಳು ನಡೆಯಲಿದೆ. ಪಂದ್ಯಗಳ ನಡುವೆ ಒಂದು ದಿವಸದ ವಿಶ್ರಾಂತಿ ಇರಲಿದೆ.
- ಈ ಪಂದ್ಯವು ಬಿಳಿ ಬಣ್ಣದ ಬಾಲ್ನಲ್ಲಿ ಆಡಲಿದ್ದು, ಆಟಗಾರರು ಬಣ್ಣದ ಪೋಶಾಕು ಧರಿಸುತ್ತಾರೆ.
- ಪ್ರತಿ ತಂಡವು 35 ಓವರ್ ಮಿತಿಯಲ್ಲಿ ಒನ್ ಡೇ ಲಿಮಿಟೆಡ್ ಓವರ್ ಪಂದ್ಯಾವಳಿಯ ನಿಯಮಾವಳಿಯಂತೆ ನಡೆಯಲಿದೆ.
- ಬೆಳಗ್ಗೆ 9 ಗಂಟೆಗೆ ಪಂದ್ಯ ಪ್ರಾರಂಭವಾಗಲಿದೆ.
ಬಿಸಿಸಿಐನ ತೀರ್ಪುಗಾರರು ಮತ್ತು ಪಂದ್ಯ ವೀಕ್ಷಕರ ನೇತೃತ್ವದಲ್ಲಿಯೇ ಈ ಪಂದ್ಯಾವಳಿ ಜರುಗಲಿವೆ. - ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆಗಾರರು ಸಹ ಆಗಮಿಸುತ್ತಿದ್ದಾರೆ.
ಎರಡು ಕಡೆಗಳಲ್ಲಿ ಉದ್ಘಾಟನೆ
ಡಿ.26ರಂದು ಪ್ರಾರಂಭವಾಗುವ ಪಂದ್ಯಗಳನ್ನು ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮತ್ತು ಎಸ್.ಪಿ ಜಿ.ಕೆ. ಮಿಥುನ್ಕುಮಾರ್ ಹಾಗೂ ಇದೇ ದಿನ ಜೆಎನ್ಎನ್ಸಿ ಶಿವಮೊಗ್ಗ ಇಲ್ಲಿ ಪ್ರಾರಂಭವಾಗುವ ಪಂದ್ಯಾವಳಿಯನ್ನು ಜೆಎನ್.ಎನ್.ಸಿಇ ಪ್ರಾಂಶುಪಾಲ ಡಾ.ನಾಗೇಂದ್ರ ಪ್ರಸಾದ್ ಉದ್ಘಾಟಿಸಲಿದ್ದಾರೆ ಎಂದರು. ಮಾಧ್ಯಮಗೋಷ್ಠಿಯಲ್ಲಿ ಶಾಸಕ ಸುಬ್ರಮಣ್ಯ ಇದ್ದರು.
https://suddikanaja.com/2022/12/24/anti-riot-drill-at-shivamogga/