ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕುಂಬಾರಗುಂಡಿಯ ಕುಮಾರ್(47), ಮಂಡಕ್ಕಿಭಟ್ಟಿ ಕಾಲೋನಿಯ ವಿಕಾಸ್(34), ಗಾಂಧಿ ಬಜಾರಿನ ಸುನೀಲ್ ಕುಮಾರ್(27) ಮತ್ತು ಅಶೋಕನಗರದ ಸುನೀಲ್ ಕುಮಾರ್(38) ಬಂಧಿತರು.
READ | ಮನೆ ಬಾಗಿಲು ಮುರಿದು ಕಳ್ಳತನ ಪ್ರಕರಣ, ಜಂಗ್ಲಿ ಗ್ಯಾಂಗ್ ಅರೆಸ್ಟ್
ಬಸ್ ನಿಲ್ದಾಣದಲ್ಲಿ ಮಾದಕವಸ್ತು ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುವುದು ಕಂಡುಬಂದಿದೆ. ತಕ್ಷಣ ಅವರನ್ನು ವಿಚಾರಿಸಿದಾಗ ಗಾಂಜಾ ಸೇವನೆ ಮಾಡಿರುವುದಾಗಿ ಆರೋಪಿಯಲ್ಲೊಬ್ಬರು ತಿಳಿಸಿದ್ದಾರೆ ಎಂದು ಎಫ್.ಐ.ಆರ್.ನಲ್ಲಿ ತಿಳಿಸಲಾಗಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಪರೀಕ್ಷೆ
ಸಾರ್ವಜನಿಕರಿಗೆ ಉಪಟಳ ನೀಡಬಹುದು ಎಂದು ಅನುಮಾನ ಇದ್ದುದ್ದರಿಂದ ನಾಲ್ವರನ್ನು ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2022/12/11/passenger-slipped-and-fell-down-while-he-try-to-board-talaguppa-mysuru-express-train-at-shivamogga-town-railway-station/