ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿದ್ಯಾನಗರ(vidyanagar)ದಿಂದ ಮತ್ತೂರು (mattur) ಕಡೆಗೆ ಹೋಗುವ ಮಾರ್ಗದಲ್ಲಿ ಮಾರಕಾಸ್ತ್ರಗಳೊಂದಿಗೆ
ಚಿನ್ನಾಭರಣ ಮತ್ತು ಹಣವನ್ನು ಕಿತ್ತುಕೊಳ್ಳಲು ಹೊಂಚು ಹಾಕಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾನಗರದ ಶ್ರೀನಿವಾಸ್ ಅಲಿಯಾಸ್ ತೊಟ್ಟಿ ಸೀನ(42), ಸುಭಾಷ್ ನಗರದ ಸುದೀಪ್(36), ಮಲವಗೊಪ್ಪದ ಯತೀಶ್(30) ಎಂಬುವವರನ್ನು ಬಂಧಿಸಿರುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.
READ | ಜನಶತಾಬ್ದಿ ಸೇರಿ ಶಿವಮೊಗ್ಗದಿಂದ ಹೊರಡುವ ವಿವಿಧ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ
ಹೊಂಚಿನ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ
ನವೆಂಬರ್ 30ರ ರಾತ್ರಿ ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣಾ (Kote police station)ವ್ಯಾಪ್ತಿಯ ವಿದ್ಯಾನಗರದಿಂದ ಮತ್ತೂರು ಕಡೆಗೆ ಹೋಗುವ ರಸ್ತೆಯ ಬಳಿ ಯಾರೋ 4 ರಿಂದ 5 ಜನರು ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ಅವರ ಬಳಿ ಇರುವ ಚಿನ್ನಾಭರಣ ಮತ್ತು ಹಣವನ್ನು ಕಿತ್ತುಕೊಳ್ಳಲು ಹೊಂಚು ಹಾಕುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕೋಟೆ ಠಾಣೆ ಪಿಐ ಚಂದ್ರಶೇಖರ್, ಪಿಎಸ್.ಐ ಮತ್ತು ಸಿಬ್ಬಂದಿಯ ತಂಡ ದಾಳಿ ನಡೆಸಿದ್ದು, ಮೂವರು ಸಿಕ್ಕಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ. ಅವರ ಹುಡುಕಾಟ ನಡೆದಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2022/12/02/shivamogga-dc-imporant-meeting-on-kyasanur-forest-disease-kfd/