ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿಕಾರಿಪುರ ತಾಲೂಕಿನ ಬನ್ನೂರು ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ವಿದ್ಯುತ್ ಪ್ರಸರಣ ಮಾಡುತ್ತಿದ್ದು, ಈ ಸಂಬಂಧ ಜ.17ರಂದುವಿಶೇಷ ಸಭೆ ಕರೆಯಲಾಗಿದೆ.
READ | ಯುವಕನಿಗೆ ₹30 ಸಾವಿರ ದಂಡ ವಿಧಿಸಿದ ಶಿವಮೊಗ್ಗ ನ್ಯಾಯಾಲಯ
ಏನಿದು ಕಾಮಗಾರಿ?
ಶಿಕಾರಿಪುರ ತಾಲೂಕು ಬನ್ನೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರು 1×10 ಎಂ.ವಿ.ಎ 110/11 ಕೆ.ವಿ. ವಿದ್ಯುತ್ ಉಪ ಕೇಂದ್ರಕ್ಕೆ ಈಗಿರುವ ಸಂಡ 110/11 ಕೆವಿ. ವಿದ್ಯುತ್ ಉಪ ಕೇಂದ್ರದಿಂದ ಸುಮಾರು 12.748 ಕಿ.ಮೀ. ಉದ್ದದ 110 ಕೆವಿ ವಿದ್ಯುತ್ ಪ್ರಸರಣ ಮಾರ್ಗವನ್ನು ನೂತನವಾಗಿ ನಿರ್ಮಿಸುವ ಕಾಮಗಾರಿಯಲ್ಲಿ ಬರುವ ಮಾರ್ಗದ ಕಾರಿಡಾರ್ ಮತ್ತು ಗೋಪುರದ ತಳಪಾಯದ ಭೂನಷ್ಟ ಪರಿಹಾರವನ್ನು ನಿಗದಿಪಡಿಸಲು ಸಾಗರ ಉಪವಿಭಾಗಾಧಿಕಾರಿಗಳವರ ಅಧ್ಯಕ್ಷತೆಯಲ್ಲಿ ಜ.17 ರಂದು ಸಂಜೆ 4ಕ್ಕೆ ಶಿಕಾರಿಪುರ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.
ಯಾವ ಊರಿನವರು ಪಾಲ್ಗೊಳ್ಳಬೇಕು?
ಈ ಸಭೆಗೆ ಶಿಕಾರಿಪುರ ತಾಲೂಕಿನ ಕಸಬ ಹೋಬಳಿಯ ಸಂಡ ಹರಗವಳ್ಳಿ, ಆಮಟಿಕೊಪ್ಪ, ಕೋಟಿಪುರ, ಕಪ್ಪನಹಳ್ಳಿ, ಚೂಚನಕೊಪ್ಪ, ಹೊತನಕಟ್ಟೆ, ರಾಂಪುರ ಮತ್ತು ಬನ್ನೂರು ಗ್ರಾಮಗಳ ಕಾರಿಡಾರ್ ಜಮೀನು ಭೂ ಮಾಲೀಕರು ಸಭೆಗೆ ತಪ್ಪದೇ ಹಾಜರಾಗುವಂತೆ ಶಿವಮೊಗ್ಗ ಬೃ,ಕಾ.ವಿ., ಕವಿಪ್ರನಿನಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.