ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಾರಾಯಣಗುರು ವಿಚಾರ ವೇದಿಕೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜ.22ರಂದು ಬೆಳಗ್ಗೆ 11 ಗಂಟೆಗೆ ನಡೆಸುತ್ತಿರುವ ಹಕ್ಕೊತ್ತಾಯ ಸಮಾವೇಶಕ್ಕೆ ಸಂಪೂರ್ಣ ಸಿದ್ಧತೆ ಮಾಡಲಾಗಿದೆ ಎಂದು ಸಿಗಂದೂರು ಚೌಡೇಶ್ವರಿ ದೇವಸ್ಥಾನದ (sigandur chowdeshwari temple) ಧರ್ಮದರ್ಶಿ ಹಾಗೂ ಹೋರಾಟ ಸಮಿತಿ ಅಧ್ಯಕ್ಷರೂ ಆದ ಎಸ್. ರಾಮಪ್ಪ (S Ramappa) ತಿಳಿಸಿದರು.
READ | ನಾರಾಯಣಗುರು ವಿಚಾರ ವೇದಿಕೆಯ ಐದು ಪ್ರಮುಖ ಬೇಡಿಕೆಗಳೇನು?
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಜಾತಿಗಳ 2ಎ ಮೀಸಲಾತಿ ರಕ್ಷಣೆ, ಈಡಿಗ ಸಮಾಜದ ಅಭಿವೃದ್ಧಿಗಾಗಿ ಮಂಡಳಿ ಸ್ಥಾಪನೆ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿಗೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬೇರೆಯ ಸಮುದಾಯಗಳಿಗೆ ನೀಡುವ ಮಾದರಿಯಲ್ಲಿಯೇ ಈಡಿಗ ಸಮುದಾಯಕ್ಕೂ ಸೌಲಭ್ಯಗಳನ್ನು ನೀಡಬೇಕು. ಸಮಾಜದ ಅಭಿವೃದ್ಧಿಗಾಗಿ ಮಂಡಳಿ ಘೋಷಣೆಯಾಗಿದೆ ಬಿಟ್ಟರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ತಕ್ಷಣವೇ ಇದನ್ನು ಕಾರ್ಯಗತ ಮಾಡಿ ₹500 ಕೋಟಿ ಒದಗಿಸಬೇಕು ಎಂದು ಮನವಿ ಮಾಡಿದರು.
ಬೇಡಿಕೆಗಳೇನು?
ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ (Satyajeet Surathkal) ಮಾತನಾಡಿ, ಮೀಸಲಾತಿ ರಕ್ಷಣೆಗಾಗಿ ಕಾಂತರಾಜು ವರದಿ ಜಾರಿಗೊಳಿಸಬೇಕು. ಶರಾವತಿ, ಸಾವೇಹಕ್ಲು ಇನ್ನಿತರ ಮುಳುಗಡೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಬೇಕು. ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸರ್ಕಾರದ ಹಸ್ತಕ್ಷೇಪ ನಿಲ್ಲಿಸಬೇಕು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಂಗಾರಪ್ಪ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಲಾಗುತ್ತದೆ ಎಂದು ಆಗ್ರಹಿಸಿದರು.
READ | ಶಿಮುಲ್ ವ್ಯಾಪ್ತಿಯ 3 ಜಿಲ್ಲೆಗಳಲ್ಲಿ ಹಾಲು ಖರೀದಿ ದರದಲ್ಲಿ ದಿಢೀರ್ ಏರಿಕೆ, ಎಂದಿನಿಂದ ಅನ್ವಯ?
ಬೃಹತ್ ಮೆರವಣಿಗೆ ಬಳಿಕ ಸಮಾವೇಶ
ಈ ಸಮಾವೇಶ ಯಾರ ಪರವಾಗಿ ಹಾಗೂ ವಿರುದ್ಧವಾಗಿಯೂ ಅಲ್ಲ. ಯಾರನ್ನೂ ದೂಷಣೆ ಮಾಡುವುದಿಲ್ಲ. ಸಂವಿಧಾನಾತ್ಮಕವಾಗಿ ಸಿಕ್ಕಬೇಕಾದ ಸೌಲಭ್ಯಗಳು ಸಮಾಜಕ್ಕೆ ಸಿಕ್ಕಬೇಕೆಂಬ ಒಂದೇ ಉದ್ದೇಶದಿಂದ ಹೋರಾಟ ನಡೆಸಲಾಗುತ್ತಿದೆ. ಅಂದು ಬೆಳಗ್ಗೆ 10 ಗಂಟೆಗೆ ಪ್ರವಾಸಿ ಮಂದಿರ ವೃತ್ತದಿಂದ ಬೃಹತ್ ಮೆರವಣಿಗೆಯನ್ನು ಮೀನಾಕ್ಷಿ ಭವನದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದವರೆಗೆ ನಡೆಸಲಾಗುತ್ತದೆ ಎಂದರು.
ಪ್ರಮುಖರಾದ ರಾಘವೇಂದ್ರ, ಕೆ.ಎಲ್.ಉಮೇಶ್, ಭುಜಂಗ, ವೆಂಕಟೇಶಮೂರ್ತಿ, ಗೀತಾಂಜಲಿ ದತ್ತಾತ್ರೇಯ, ಶಿವು ಹೊದ್ಲ ಉಪಸ್ಥಿತರಿದ್ದರು.