ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಿಜೆಪಿಯಿಂದ ಯಾರೂ ಕೂಡ ಸಾಯುವಂತಹ ಪಕ್ಷಕ್ಕೆ ಹೋಗುವುದಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಅವರು ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಅನೇಕರು ಕಾಂಗ್ರೆಸ್ಗೆ ವಲಸೆ ಬರುತ್ತಿದ್ದಾರೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದರು.
READ | ನಾನೀಗ ಸಚಿವನಾಗುವ ಆಸೆ ಬಿಟ್ಟಿದ್ದೇನೆ, ಸರ್ಕಾರಕ್ಕೆ ಮತ್ತೊಂದು ಸಮಸ್ಯೆಯಾಗಲಾರೆ
ಬಿಜೆಪಿಯಿಂದ ಯಾರೂ ಕೂಡ ಸಾಯುವಂತಹ ಪಕ್ಷಕ್ಕೆ ಹೋಗುವುದಿಲ್ಲ. ಆ ಪಕ್ಷ ಮುಳುಗುತ್ತಿರುವ ಹಡಗು ಅಲ್ಲಿಂದಲೆ ನಮ್ಮೆಡೆಗೆ ಬರುತ್ತಿದ್ದಾರೆ. 17 ಜನ ಸಚಿವರು ಹಿಂದೆ ನಮ್ಮಲ್ಲಿಗೆ ಯಾಕೆ ಬಂದರು? ಆ ಪಕ್ಷದಲ್ಲಿ ಒಳ ಜಗಳ, ಗುಂಪುಗಾರಿಕೆ ಇದೆ ಎಂದು ಅಲ್ಲಿಯವರೆ ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ಹೇಳಿದರು.
ವಿಶ್ವನಾಥ್ ಹೋದರೆ ಬಿಜೆಪಿಗೆ ನಷ್ಟವಿಲ್ಲ
ಎಂಎಲ್ಸಿ ವಿಶ್ವನಾಥ್ ನಾಮ ನಿರ್ದೇಶಿತಗೊಂಡವರು ಅವರು ಹೋದಲ್ಲಿ ಬಿಜೆಪಿಗೆ ನಷ್ಟವಿಲ್ಲ. ವಿಶ್ವನಾಥ್ ಅವರು ಹಿಂದೆ ಸಿದ್ಧರಾಮಯ್ಯನವರಿಗೆ ತೆಗಳುತ್ತಾ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ನಮ್ಮ ಪಕ್ಷಕ್ಕೆ ಬಂದವರು. ಈಗ ಯಾವುದೋ ಲಾಭಕ್ಕಾಗಿ ಹೋಗುತ್ತಿದ್ದಾರೆ. ಹಿಂದೆ ಅವರೆ ಸಿದ್ಧರಾಮಯ್ಯನವರು ದ್ರೋಹ ಮಾಡಿದ್ದಾರೆ ಎಂದಿದ್ದರು. ಕೆಸಿಆರ್ ಕಾಂಗ್ರೆಸ್ ಒಡೆಯಲು ₹500 ಕೋಟಿ ನೀಡಿದ್ದಾರೆ ಎಂಬುದು ಕಾಂಗ್ರೆಸ್ಸಿಗರೇ ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಹುಣಸೋಡು ಪರಿಹಾರ ನೀಡಲು ಬರುವುದಿಲ್ಲ
ಹುಣಸೋಡು ಘಟನೆಗೆ ಸಂಬಂಧಿಸಿದಂತೆ ತಾಂತ್ರಿಕ ತೊಂದರೆಯಿಂದಾಗಿ ಸರ್ಕಾರ ಪರಿಹಾರ ನೀಡಲು ಬರುವುದಿಲ್ಲ. ಈ ಬಗ್ಗೆ ಸ್ಥಳೀಯ ನಾಯಕರು ಕೋರ್ಟಿಗೆ ಹೋಗಲು ತೀರ್ಮಾನಿಸಿದ್ದಾರೆ ಎಂದರು.