
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಿಡಾಡಿ ಕುದುರೆಗಳ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ಜರುಗಿಸಲು ಪಾಲಿಕೆ ಮುಂದಾಗಿದೆ. ಮಾಲೀಕರಿಗೆ ಏಳು ದಿನಗಳ ಗಡುವು ನೀಡಲಾಗಿದೆ.
ಎಲ್ಲ ಶಿವಮೊಗ್ಗದ ನಾಗರಿಕರಿಗೆ ಅಥವಾ ಬಿಡಾಡಿ ಕುದುರೆಗಳ ಮಾಲೀಕತ್ವವುಳ್ಳಂತ ಯಾರಾದರು ವಾರಸುದಾರರಿದ್ದಲ್ಲಿ ಕಡ್ಡಾಯವಾಗಿ 7 ದಿನಗಳೊಳಗಾಗಿ ತಮ್ಮ ಕುದುರೆಗಳನ್ನು ಸುಪರ್ದಿಗೆ ಪಡೆಯತಕ್ಕದ್ದು. ಇಲ್ಲವಾದಲ್ಲಿ ಕಟ್ಟುನಿಟ್ಟಾಗಿ ಕುದುರೆಗಳನ್ನು ಬಿಡಾಡಿ ಕುದುರೆಗಳೆಂದು ಪರಿಗಣಿಸಿ ಸಾರ್ವಜನಿಕ ಉಪಟಳವೆಂದು ಪರಿಗಣಿಸಿ ಕರ್ನಾಟಕ ಕಾರ್ಪೋರೇಷನ್ ಕಾಯ್ದೆಯ ವಿಧಿಗಳ ಅನುಸಾರ ಆಯುಕ್ತರಿಗೆ ದತ್ತವಿರುವ ಅಧಿಕಾರವನ್ನು ಚಲಾಯಿಸಿ ಬೀಡಾಡಿ ಕುದುರೆಗಳನ್ನು ಯಾವುದೇ ಮುನ್ಸೂಚನೆ ಅಥವಾ ತಿಳಿವಳಿಕೆ ನೀಡದೆ ಸೂಕ್ತ ಎನ್ಜಿಓಗಳ ವಶಕ್ಕೆ ನೀಡುವಂತೆ ನಿಯಾಮಾನುಸಾರ ಕ್ರಮಗಳನ್ನು ಜರುಗಿಸಲಾಗುವುದೆಂದು ಪ್ರಕಟಣೆಯ ಮೂಲಕ ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.
READ | ಶಿಮುಲ್ ವಾಪ್ತಿಯ ಮೂರು ಜಿಲ್ಲೆಗಳಲ್ಲಿ ಹಾಲಿನ ದರದಲ್ಲಿ ದಿಢೀರ್ ಏರಿಕೆ
ವಾರಸುದಾರರು ಇವರನ್ನು ಸಂಪರ್ಕಿಸಿ
ಬೀಡಾಡಿ ಕುದುರೆಗಳಿಗೆ ಸಂಬಂಧಪಟ್ಟಂತಹ ವಾರಸುದಾರರಿದ್ದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಪಶುಸಂಗೋಪನ ಅಧಿಕಾರಿಗಳು ಮೊಬೈಲ್9886326268 ಅವರನ್ನು ಸಂಪರ್ಕಿಸಿ, ತಮ್ಮ ವಿವರಗಳನ್ನು ನೀಡಬಹುದು ಅಥವಾ ಇಮೇಲ್ healthcitycorporation@gmail.com ವಿಳಾಸಕ್ಕೆ ತಮ್ಮ ದೂರುಗಳನ್ನು ದಾಖಲಿಸಬಹುದು.
ಬಿಡಾಡಿ ಕುದುರೆಗಳ ಉಪಟಳ
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಗರದ ರಸ್ತೆಗಳಲ್ಲಿ, ವೃತ್ತಗಳಲ್ಲಿ, ಬಡಾವಣೆಗಳಲ್ಲಿ ಬಿಡಾಗಿ ಮರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವುಗಳು ರಸ್ತೆ ಮತ್ತು ವೃತ್ತಗಳಲ್ಲಿ ಅಡ್ಡಾದಿಡ್ಡಿ, ತಿರುಗಾಡುವುದು, ಮಲಗುವುದು, ಸಾರ್ವಜನಿಕರ ಮೇಲೆ ನುಗ್ಗುವುದು ಹಾಗೂ ವಾಹನಗಳಿಗೆ ಅಡ್ಡಿ ಬರುತ್ತಿರುವುದರಿಂದ ಅವಘಾತಗಳು ಮತ್ತು ಸಾರ್ವಜನಿಕ ಉಪದ್ರವದ ಬಗ್ಗೆ ಅನೇಕ ದೂರುಗಳು ಬಂದಿವೆ. ಈ ಹಿಂದೆ ಅನೇಕ ಬಾರಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ಮಾಲೀಕರು, ವಾರಸುದಾರರಿಗೆ ತಮ್ಮ ಕುದುರೆಗಳನ್ನು ಸುಪರ್ದಿಗೆ ತೆಗೆದುಕೊಳ್ಳಲು ತಿಳಿವಳಿಕೆ ಹೊರಡಿಸಲಾಗಿತ್ತು.
ಸುಪರ್ದಿಗೆ ಪಡೆಯದಿದ್ದಲ್ಲಿ ಆಸಕ್ತಿಯುಳ್ಳ ಸಂಘ ಸಂಸ್ಥೆಗಳು ಅಥವಾ ಆ ಬಿಡಾಡಿ ಕುದುರೆಗಳನ್ನು ಸಾಕಿ ಸಲಹಿ ಉಪಯೋಗ ಪಡೆಯುವಂತ ಆಸಕ್ತಿಯುಳ್ಳ ವಿವಿಧ ಯೋಜನೆಗಳನ್ನು ಉಳ್ಳಂತ ಸಾರ್ವಜನಿಕರು ಮುಂದೆ ಬಂದಲ್ಲಿ ಕುದುರೆಗಳನ್ನು ನೀಡುವುದಾಗಿ ಪ್ರಕಟಣೆ ಹೊರಡಿಸಲಾಗಿತ್ತು. ಆದಾಗ್ಯೂ ಬಿಡಾಡಿ ಕುದುರೆಗಳು, ಕುದುರೆಯ ಮರಿಗಳು, ರೋಗಗ್ರಸ್ಥ ಹಾಗೂ ಅಂಗವಿಕಲ ಕುದುರೆಗಳು ರಸ್ತೆಗಳಲ್ಲಿ ಓಡಾಡುತ್ತಿದ್ದು ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯುಂಟಾಗುತ್ತಿದ್ದು ಈ ಸಂಬಂಧ ಈಗಾಗಲೇ ಹಲವಾರು ಸಾರ್ವಜನಿಕ ದೂರುಗಳು ಸ್ವೀಕೃತವಾಗಿರುತ್ತವೆ.
ಯಾವುದಕ್ಕೆಲ್ಲ ಬಳಸಬಹುದು ಬೀಡಾಡಿ ಕುದುರೆ?
ಕೆಲವು ಎನ್ಜಿಓಗಳು/ ಸ್ವಯಂ ಸೇವಾ ಸಂಸ್ಥೆಗಳು /ಏಜೆನ್ಸಿಗಳು ಈ ಬೀಡಾಡಿ ಕುದುರೆಗಳನ್ನು ಉಚಿತವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಸಾಗಿಸಲು ಅನುಮತಿ ನೀಡಿದಲ್ಲಿ ಅವುಗಳನ್ನು ಬಳಸಿಕೊಂಡು ಯಾಂತ್ರೀಕೃತವಾಗಿ ಬ್ಯಾಟರಿ ಚಾಲಿತ ಯಂತ್ರವನ್ನು ಬಳಸಿ, ವ್ಯವಸಾಯ ಕ್ಷೇತ್ರಕ್ಕೆ ಬಳಸಿಕೊಳ್ಳುವುದು, ಸಾಗಾಣಿಕೆ ಕ್ಷೇತ್ರಕ್ಕೆ ಬಳಸಿಕೊಳ್ಳುವುದು ಇತ್ಯಾದಿ ತೋಟದಲ್ಲಿ ಜೀವಾಮೃತವನ್ನು ಸಾಗಿಸುವುದು ಹಾಗೂ ಇತರೆ ಕೆಲಸಗಳಿಗೆ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದಾಗಿ ಮನವಿಯನ್ನು ಸಲ್ಲಿಸಿರುತ್ತಾರೆ.
ಈ ಪ್ರಸ್ತಾವನೆಗೆ ಕೇಂದ್ರ ಆಹಾರ ಸಂಶೋಧನ ಕೇಂದ್ರ ಮೈಸೂರು ಹಾಗೂ ರಾಷ್ಟ್ರೀಯ ತೋಟಗಾರಿಕ ಮಿಷನ್ ಬೆಂಗಳೂರು ಇವರ ಮಾರ್ಗದರ್ಶನ ಪಡೆಯಲಾಗಿದೆ. ಈ ಎನ್ಜಿಓ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಪರಿಣಿತಿ ಹೊಂದಿರುವುದಾಗಿ ಪ್ರತ್ಯಕ್ಷವಾಗಿ ನಡೆದಂತಹ ಹಲವಾರು ಸಭೆಗಳಲ್ಲಿ ಮತ್ತು ಹಲವು ಪ್ರಸ್ತಾವನೆಗಳಲ್ಲಿ ತಿಳಿದುಬಂದಿರುತ್ತದೆ.