ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಎರಡನೇ ಹಂತದ 2023-24ನೇ ಸಾಲಿನ ಆಯ-ವ್ಯಯ (ಬಜೆಟ್) ಪೂರ್ವಭಾವಿ ಸಭೆಯಲ್ಲಿ ನಾಗರಿಕರು ತಮ್ಮ ಬೇಡಿಕೆಗಳನ್ನು ಮಂಡಿಸಿದರು.
ಮೇಯರ್ ಎನ್.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನರು ನೀಡಿದ ಸಲಹೆಗಳು ಕೆಳಗಿನಂತಿವೆ.
ಫೆ.15ರೊಳಗೆ ಶೌಚಾಲಯಕ್ಕೆ ಚಾಲನೆ
ನಗರದ ಸುತ್ತಲು ಉಚಿತ ಶೌಚಾಲಯಕ್ಕೆ ಫೆಬ್ರವರಿ 15ರ ನಂತರ ಚಾಲನೆಯಾಗುವುದು. ಅದರ ಸ್ವಚ್ಛತೆಗೆ ಪಾಲಿಕೆಯಿಂದ ಸಿಬ್ಬಂದಿ ನೇಮಿಸಲಾಗುವುದು. ರಸ್ತೆಯಲ್ಲಿ ಸಾರ್ವಜನಿಕರಿಗೆ ಬಿಡಾಡಿ ದನ, ಕುದುರೆ ಇತರೆ ಪ್ರಾಣಿಗಳಿಂದ ತೊಂದರೆ ಆಗುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಅದಕ್ಕೆ ಸಂಬಂಧಪಟ್ಟಂತೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿದೆ. ಪ್ರಾಣಿಗಳ ಮಾಲೀಕರು ಪ್ರಾಣಿಗಳ ರಸ್ತೆಗೆ ಬಿಡದೆ ಬಂಧಿಸಬೇಕು. ಇಲ್ಲದಿದ್ದಲ್ಲಿ ಇಲಾಖೆ ಅವುಗಳನ್ನು ವಶಪಡಸಿಕೊಂಡು ಎನ್ ಜಿಓಗೆ ನೀಡಲಾಗುವುದು ಎಂದು ಆಯುಕ್ತ ಮಾಯಣ್ಣಗೌಡ ಹೇಳಿದರು.
READ | ರಾಜಕೀಯ ಪ್ರವೇಶದ ಬಗ್ಗೆ ಸಿ.ಎಸ್.ಷಡಾಕ್ಷರಿ ಹೇಳಿದ್ದೇನು?
ಪಾಲಿಕೆಯ ಬಜೆಟ್ ಬಗ್ಗೆ ಜನಾಭಿಮತ
- ರಾಜಕಾಲುವೆ ಒತ್ತುವರಿ ಬೇಡ, ಅದನ್ನು ವಿಸ್ತರಿಸಿ, ಅದರ ಹೂಳು ಎತ್ತಲು ಹಣ ಇಡಿ. ನಗರದಲ್ಲಿ ರಸ್ತೆಗಳು ವಿಸ್ತರಣೆಯಾಗಿವೆ. ನೆಲವೆಲ್ಲ ಕಾಂಕ್ರೀಟ್, ಟೈಲ್ಸ್ ಗಳಿಂದ ಕೂಡಿದೆ. ನಗರದ ತಾಪಮಾನ ಹೆಚ್ಚುತ್ತಿದೆ. ನಗರದ ಸುತ್ತಲು ಗಿಡಗಳನ್ನು ನೆಡಿ. ಅದರ ಬೇರುಗಳಿಂದ ಮನೆ ಗೋಡೆ ಹಾಳು ಆಗದಂತೆ ಇರುವ ಗಿಡಗಳ ಆಯ್ಕೆ ಮಾಡಿ.
- ತೆರಿಗೆಯ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕರಿಗೆ ಓಡಾಡಲು ಪುಟ್ ಪಾತ್ ನಿರ್ಮಿಸಲಾಗಿದೆ. ಆದರೆ, ಬೀದಿಬದಿ ವ್ಯಾಪಾರಿಗಳು, ಅಂಗಡಿ ವರ್ತಕರು, ಸಂಪೂರ್ಣ ಪುತ್ ಪಾತ್ ಆಕ್ರಮಿಸಿ ಕೊಂಡಿರುವರು. ಅವರನ್ನು ಸಂಪೂರ್ಣ ತೆರವು ಮಾಡಿ ಕೆಲವು ದಿನಗಳ ಹಿಂದೆ ಕಾರ್ಯಚರಣೆ ಮಾಡಿ ಅರ್ಧದಲ್ಲೆ ತೆರವು ಕಾರ್ಯಾಚರಣೆ ಕೈ ಬಿಟ್ಟಿರುವಿರಿ.
- ನಿಜವಾದ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ವೆಂಡಿಂಗ್ ಝೋನ್ ಮಾಡಿ, ಅಲ್ಲಿ ಅವರಿಗೆ ಸ್ಥಳಗಳನ್ನು ನೀಡಿ, ನಿಜವಾದ ಫಲಾನುಭವಿಗಳ ಬಿಟ್ಟು ಬೇರೆಯವರಿಗೆ ಅವಕಾಶ ನೀಡಬೇಡಿ.
- ಕನ್ಸರ್ವೆನ್ಸಿಗಳು ಅಭಿವೃದ್ದಿಯಾಗಿವೆ. ಅವುಗಳನ್ನು ಪಾಲಿಕೆ ವಶಕ್ಕೆ ಪಡೆದು ದ್ವಿಚಕ್ರ ಹಾಗೂ ಲಘು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಯಾವ ಕಾರಣಕ್ಕೆ ವಿಳಂಬ ಬೇಡ.
ಉಪ ಮೇಯರ್ ಲಕ್ಶ್ಮೀ ಶಂಕರ್, ಆಯುಕ್ತರ ಮಾಯಣ್ಣ ಗೌಡ, ಉಪ ಆಯುಕ್ತರು, ಸಿ.ಇ.ಓ. ವಿವಿಧ ಸಂಘಟನೆಯ ಮುಖಂಡರಾದ ವಸಂತಕುಮಾರ್, ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಜನ್ಮೋಜಿರಾವ್, ಗೋಪಾಲ್, ಜನಾರ್ಧನ್ ಪೈ, ಗೋಪಿನಾಥ್, ಚನ್ನವೀರಪ್ಪ ಗಾಮನಗಟ್ಟಿ, ವಿನೋದ್ ಪೈ, ಪರಿಸರ ನಾಗರಾಜ್, ಪ್ರಕಾಶ್, ಶ್ರವಣ್, ಮನೋಹರ್, ನಾಗರಾಜ್ ಶೆಟ್ಟರ್, ನವ್ಯಶ್ರೀ ನಾಗೇಶ್, ಸತ್ಯನಾರಾಯಣ, ಪಾಲಿಕೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
https://suddikanaja.com/2023/01/28/shares-of-80-factories-in-the-country-including-visl-return/