ಸುದ್ದಿ ಕಣಜ.ಕಾಂ ಹೊಸನಗರ
HOSANAGAR: ತಾಲೂಕಿನ ಯಡೂರು ತಲಾಸಿ ಅಬ್ಬಿ ಫಾಲ್ಸ್(talasi abbi falls)ನಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಬ್ರಹ್ಮಾವರ ಮೂಲದ ರವಿ ಎಂಬುವವರು ತೀರ್ಥಹಳ್ಳಿ ತಾಲೂಕಿನ ಆಗುಂಬೆ ನಿಲ್ದಾಣದಲ್ಲಿ ಹೋಟೆಲ್ ನಡೆಸುತ್ತಿದ್ದು, ಅವರ ಪುತ್ರನಾದ ರಿಷಬ್ ಶೆಟ್ಟಿ(19) ಎಂಬುವವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
READ | ಶಿವಮೊಗ್ಗ ವಿಮಾನ ನಿಲ್ದಾಣ ನಾಮಕರಣ ವಿಚಾರ ಮತ್ತೆ ಮುನ್ನೆಲೆಗೆ, ಯಾರ ಹೆಸರಿಡುವಂತೆ ಒತ್ತಾಯ?
ಸ್ನೇಹಿತರೊಂದಿಗೆ ಈಜಲು ಹೋದಾಗ ಘಟನೆ
ತೀರ್ಥಹಳ್ಳಿ ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದ ರಿಷಬ್ ಅವರು ತಮ್ಮ ಸ್ನೇಹಿತರಾದ ಗುಡ್ಡೇಕೇರಿಯ ಸುಮಂತ್, ಕೊಪ್ಪದ ಅಭಿಷೇಕ್ ಅವರೊಂದಿಗೆ ಫಾಲ್ಸ್ ನೀರು ಧುಮ್ಮಿಕ್ಕುವ ಸ್ಥಳಕ್ಕೆ ಹೋಗಿದ್ದಾರೆ. ನೀರಿನಲ್ಲಿ ಮುಳುಗಿದ ರಿಷಬ್ ಮೇಲೆತ್ತಲು ಸ್ನೇಹಿತರು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉನ್ನತ ವ್ಯಾಸಂಗದ ಕನಸು
ರಿಷಬ್ ಅವರು ಉನ್ನತ ವ್ಯಾಸಂಗ ಮಾಡುವ ಕನಸು ಹೊಂದಿದ್ದರು ಎಂದು ತಿಳಿದುಬಂದಿದೆ. ಅವರ ಅಕಾಲಿಕ ಸಾವಿನಿಂದ ಕುಟುಂಬ ಆಘಾತಕ್ಕೆ ಒಳಗಾಗಿದೆ. ರವಿ ಶೆಟ್ಟಿ ಅವರಿಗೆ ರಿಷಬ್ ಒಬ್ಬನೇ ಪುತ್ರನಿದ್ದಾನೆ.
https://suddikanaja.com/2023/01/02/one-accused-arrested-at-shimoga/