ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೆ.27ರಂದು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು, ಅವರಿಗೆ ನೀಡಲು ವಿಶೇಷ ಉಡುಗೊರೆಯನ್ನು ಸಿದ್ಧಪಡಿಸಲಾಗಿದೆ. ವಿಶೇಷವೆಂದರೆ, ಅದನ್ನು ಶ್ರೀಗಂಧದಲ್ಲಿ ತಯಾರಿಸಿದ್ದು ಸಾಗರದ ಕಲಾವಿದ ಆದರ್ಶ್.
ಸಾಗರದ ಶ್ರೀಗಂಧ ಸಂಕೀರ್ಣದ ಕಲಾವಿದ ಆದರ್ಶ್ ಅವರು ಗಂಧದ ಚೆಂದದ ಕಲಾಕೃತಿ ಸಿದ್ಧಪಡಿಸಿದ್ದು, ಅದನ್ನೇ ಮೋದಿ ಅವರಿಗೆ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ.
READ | ವಿಮಾನ ನಿಲ್ದಾಣ ಉದ್ಘಾಟನೆಗೆ ಬರುತ್ತಿರುವ ಪ್ರಧಾನ ಮೋದಿಗೆ ನೀಡಲು ಸಿದ್ಧವಾಗಿವೇ ಶ್ರೀಗಂಧದ ವಿಶೇಷ ಉಡುಗೊರೆ, ಏನದು?
ಕಲಾಕೃತಿಯ ವಿಶೇಷಗಳೇನು?
- 2.5 ಅಡಿ ಅಳತೆಯ ಬೇಸ್ಮೆಂಟ್ ಹೊಂದಿರುವ, 11 ಇಂಚು ಎತ್ತರದ ಕಲಾಕೃತಿ ಇದಾಗಿದೆ.
- ಈ ಕಲಾಕೃತಿಯನ್ನು ಕಲಾವಿದ ಆದರ್ಶ್ ಬರೀ 12 ದಿನಗಳಲ್ಲಿ ಸಿದ್ಧಪಡಿಸಿದ್ದಾರೆ.
- ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿಯನ್ನು ತಯಾಸಿರುವ ಕಲಾವಿದರು ಇದಕ್ಕಾಗಿ ಯಾವುದೇ ಉಪಕರಣ ಬಳಸಿಲ್ಲ.
ಶ್ರೀಗಂಧದಲ್ಲಿ ಹತ್ತಾರು ಕಲಾಕೃತಿ
ಆದರ್ಶ್ ಅವರು ಹಲವು ಕಲಾಕೃತಿ ಸಿದ್ಧಪಡಿಸಿದ್ದಾರೆ. ಈ ಹಿಂದೆ ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿಯಾಗಿದ್ದಾಗ ಬೆಂಗಳೂರಿಗೆ ಬಂದಿದ್ದರು. ಆಗ ಶ್ರೀಗಂಧದಿಂದಲೇ ಉಚ್ಚನ್ಯಾಯಾಲಯದ ಕಲಾಕೃತಿ ಸಿದ್ಧಪಡಿಸಿದ್ದರು.
ಬೆಕ್ಕಿನಕಲ್ಮಠ ಉದ್ಘಾಟನೆ ಕಾರ್ಯಕ್ರಮದಲ್ಲೂ ಯಡಿಯೂರಪ್ಪ ಅವರಿಗೆ ಹಂಪಿಯ ಕಲ್ಲಿನ ರಥದ ಮಾದರಿಯನ್ನು ಕೆತ್ತನೆ ಮಾಡಿ ನೀಡಿದ್ದರು.