ಸುದ್ದಿ ಕಣಜ.ಕಾಂ ಶಿಕಾರಿಪುರ
SHIKARIPURA: ತಾಲ್ಲೂಕಿನ ಉಡುತಡಿಯಲ್ಲಿ ನಿರ್ಮಿಸಿರುವ 64 ಅಡಿ ಎತ್ತರದ ಅಕ್ಕಮಹಾದೇವಿ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿ ಆಶ್ವಾಸನೆಗಳ ಮಹಾಪೂರವನ್ನೇ ಹರಿಸಿದರು.
ಅಕ್ಕಮಹಾದೇವಿ ಪುತ್ಥಳಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, “ಶಿಕಾರಿಪುರ ದೇವರ ನಾಡು, ದೇವರು ಪ್ರೀತಿಸುವ ನಾಡು. ಈ ತಾಲ್ಲೂಕನ್ನು ಮಾದರಿ ಕೃಷಿ, ಆಧ್ಯಾತ್ಮಿಕ ತಾಲ್ಲೂಕನ್ನಾಗಿ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೇವೆ. ಆ ಕೆಲಸವನ್ನು ಭವಿಷ್ಯದಲ್ಲಿ ಮಾಡುತ್ತೇವೆ” ಎಂದರು.
READ | ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದ ಶಿವಮೊಗ್ಗ ಜಿಲ್ಲಾ ಪಂಚಾಯಿತಿ, ಕಾರಣವೇನು?
9ನೇ ಶತಮಾನಗಳ ನಂತರ ಶಿವಶರಣರ ನಾಡು ಹಾಗೂ ಬಸವಕಲ್ಯಾಣದ ಅಭಿವೃದ್ಧಿಯನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಡಿದ್ದಾರೆ. ಶಿಕಾರಿಪುರಕ್ಕೂ ಯಡಿಯೂರಪ್ಪರಿಗೂ ಅವಿನಾಭಾವ ಸಂಬಂಧವಿದೆ. ಮೊನ್ನೆ ಅವರ ಬಳಿ ಹೋದಾಗ, ಏಳೆಂಟು ಕೆಲಸಗಳ ಪಟ್ಟಿ ಕೊಟ್ಟು ಈ ಕೆಲಸ ಆಗಬೇಕು ಎಂದಿದ್ದರು. ಅಷ್ಟೊಂದು ಬದ್ಧತೆ ಯಡಿಯೂರಪ್ಪ ಅವರದ್ದು. ನಾನು ಇಲ್ಲಿ ನಿಮಿತ್ತ ಮಾತ್ರ ಎಲ್ಲವೂ ಯಡಿಯೂರಪ್ಪನವರ ಶಕ್ತಿ. ಈಗಲೂ ಚೀಟಿಕೊಟ್ಟು ಕಳಿಸಿ ಕೊಟ್ಟು ಅಲ್ಲಮಪ್ರಭು ಅನುಭವ ಮಂಟಪಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದಿದ್ದಾರೆ. ಅಲ್ಲಮಪ್ರಭು ನನ್ನ ಆರಾಧ್ಯದೈವ, ಬಿಎಸ್ ಯಡಿಯೂರಪ್ಪನವರು ಹೇಳಿದಂತೆ ಅನುದಾನ ಬಿಡುಗಡೆ ಮಾಡಿಸುತ್ತಾರೆ. ಶಿವನಪಾದ ಅಭಿವೃದ್ಧಿಯನ್ನು ₹10 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದರು.
ಯಡಿಯೂರಪ್ಪರ ಬಣ್ಣನೆ ಮಾಡಿದ ಸಿಎಂ
“ನಾನು ಬಿಎಸ್ವೈ ನೆರಳಿನಲ್ಲಿ ಬಂದವನು. ಅವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇನೆ. ನನಗೆ ಕ್ಲಿಷ್ಟ ಹಾಗೂ ಕಷ್ಟ ಪರಿಸ್ಥಿತಿ ಎದುರಾದಾಗ, ನನಗೆ ಕರೆದು ಮಾರ್ಗದರ್ಶನ ನೀಡಿ, ರಾಜ್ಯದ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬಿದವರು ಯಡಿಯೂರಪ್ಪ. ಹೀಗಾಗಿ ತಂದೆ ಮಗನ ಸಂಬಂಧ, ಪ್ರೀತಿ ಮತ್ತು ವಿಶ್ವಾಸಕ್ಕೂ ಮೀರಿದ ಸಂಬಂಧವಾಗಿದೆ. ಇದು ಶಾಶ್ವತವಾಗಿರುತ್ತದೆ. ನಿಮ್ಮ ಭಾವನೆಗಳೆ ಮುಂದಿನ ಭವಿಷ್ಯ ನಿರ್ಮಾಣಮಾಡಲಿದೆ. ರಾಜ್ಯದ ಅಭಿವೃದ್ಧಿ ಆಗಬೇಕು. ಕರ್ನಾಟಕದಲ್ಲಿ ಬಡತನ ನೀಗಿ ಅಭಿವೃದ್ಧಿ ಸಮೃದ್ಧಿ ಆಗಬೇಕಿದೆ ಎಂದರು.
ಬಿಎಸ್ ವೈ ಮೇಲೆ ತೋರಿಸಿದ ಪ್ರೀತಿಯನ್ನು ವಿಜಯೇಂದ್ರವರ ಮೇಲೂ ನೀವು ತೋರಿಸಬೇಕು ಎಂದು ಕರೆಕೊಟ್ಟರು.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಂಸದ ಬಿವೈ ರಾಘವೇಂದ್ರ, ಸಚಿವ ಗೋವಿಂದ ಕಾರಜೋಳ, ಬಿ.ವೈ. ವಿಜಯೇಂದ್ರ, ಮಲೆನಾಡು ಪ್ರದೇಶಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಎಂ.ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ ಚನ್ನವೀರಪ್ಪ ಸೇರಿ ಪ್ರಮುಖರು ಉಪಸ್ಥಿತರಿದ್ದರು.
King cobra | ಮಲೆನಾಡಿಗರೇ ಎಚ್ಚರ! ಎಲ್ಲೆಡೆ ಶುರುವಾಗಿದೆ ಕಾಳಿಂಗ ಸರ್ಪಗಳ ಮಿಲನ, ಇಲ್ಲಿದೆ ಇಂಟರೆಸ್ಟಿಂಗ್ ಲೇಖನ