ಸುದ್ದಿ ಕಣಜ.ಕಾಂ ಸೊರಬ
SORAB: ತಾಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನ(chandragutti sri Renukamba temple)ದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು.
ಚಂದ್ರಗುತ್ತಿ ನಾಡಕಚೇರಿ ಉಪ ತಹಶೀಲ್ದಾರ ವಿ.ಎಲ್.ಶಿವಪ್ರಸಾದ್ ಸಮ್ಮುಖದಲ್ಲಿ ಜಾತ್ರೆ ಸಂದರ್ಭದಲ್ಲಿ ಭಕ್ತರಿಂದ ಸಂಗ್ರಹವಾದ ಕಾಣಿಕೆ ಹುಂಡಿ ಹಣವನ್ನು ಎಣಿಕೆ ಮಾಡಲಾಯಿತು.
READ | ಶಿವಮೊಗ್ಗದಾದ್ಯಂತ ಸಂಭ್ರಮದಿಂದ ನಡೆದ ರಾಮ ನವಮಿ, ಎಲ್ಲಿ ಏನೇನಾಯ್ತು?
ಎರಡು ತಿಂಗಳಲ್ಲಿ ₹41 ಲಕ್ಷ ಕಾಣಿಕೆ ಸಂಗ್ರಹ
ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ಹುಂಡಿಗೆ ಹಾಕಿದ ಹಣದ ಎಣಿಕೆ ಕಾರ್ಯ ನಡೆಸಿದಾಗ ₹18.56 ಲಕ್ಷ ಹಣ ಸಂಗ್ರಹವಾಗಿತ್ತು. ಫೆಬ್ರವರಿಯಲ್ಲಿ ಹುಂಡಿ ಎಣಿಕೆ ಮಾಡಲಾಗಿದ್ದು, ₹22.67 ಲಕ್ಷ ಹಣ ಸಂಗ್ರಹವಾಗಿತ್ತು. ಎರಡು ತಿಂಗಳಲ್ಲಿ ಒಟ್ಟು ₹41,23,920 ಹಣ ಸಂಗ್ರಹವಾಗಿದೆ. ಇದು ದಾಖಲೆ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ವಿಷಯ ನಿರ್ವಾಹಕರು, ತಾಲೂಕು ಕಂದಾಯ ಇಲಾಖೆ ಗ್ರಾಮ ಲೆಕ್ಕಿಗ, ದೇವಸ್ಥಾನ ಸಿಬ್ಬಂದಿ ಉಪಸ್ಥಿತರಿದ್ದರು.
TOP 14 News | ಶಿವಮೊಗ್ಗದ ಇಂದಿನ ಬಿಸಿ ಬಿಸಿ ಸುದ್ದಿಗಳೇನು? ಕ್ಲಿಕ್ ಮಾಡಿ ಓದಿ