ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ ವಿಧಾನಸಭೆ ಚುನಾವಣೆ (karnataka assembly election)ಗೆ ರಣಕಹಳೆ ಊದಿದ್ದೇ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಟೋ ಮಾಲೀಕರಿಗೂ ಇದರ ಬಿಸಿ ತಟ್ಟಲಿದೆ.
ಈ ಕುರಿತು ಶಿವಮೊಗ್ಗ ಸಂಚಾರ ಠಾಣೆ (shimoga traffic police station) ಸಿಪಿಐ ಜಯಶ್ರೀ ಮಾನೆ (Jayashree) ಅವರು ನಗರದ ಆಟೋ ಚಾಲಕರು ಮತ್ತು ಮಾಲೀಕರ ಸಂಘಗಳ ಪದಾಧಿಕಾರಿಗಳ ಸಭೆಯನ್ನು ನಡೆಸಿ, ಈ ಕೆಳಕಂಡ ಸೂಚನೆಗಳನ್ನು ನೀಡಿದ್ದಾರೆ.
- ಯಾವುದೇ ಕಾರಣಕ್ಕೂ ಆಟೋಗಳ ಪರವಾನಗಿ ನಿಯಮಗಳನ್ನು ಉಲ್ಲಂಘನೆ ಮಾಡುವಂತಿಲ್ಲ. ಒಂದುವೇಳೆ ಉಲ್ಲಂಘನೆ ಮಾಡಿದ್ದಲ್ಲಿ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ಆಟೋಗಳ ಮೇಲೆ ಯಾವುದೇ ರಾಜಕೀಯ ಪಕ್ಷಗಳ ಪರವಾಗಿ ಬ್ಯಾನರ್ ಮತ್ತು ಪೋಸ್ಟರ್ ಗಳನ್ನು ಅಂಟಿಸಿ ಪ್ರಚಾರ ಮಾಡುವಂತಿಲ್ಲ. ಒಂದುವೇಳೆ ಆಟೋಗಳನ್ನು ಯಾವುದಾದರೂ ರಾಜಕೀಯ ಉದ್ದೇಶಗಳಿಗಾಗಿ ಬಳಸಬೇಕಾದಲ್ಲಿ, ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಅನುಮತಿಯನ್ನು ಪಡೆಯತಕ್ಕದ್ದು.
- ಆಟೋಗಳಲ್ಲಿ ಅಕ್ರಮವಾಗಿ ನಗದು ಹಣ, ಇತರೆ ವಸ್ತುಗಳನ್ನು ಯಾವುದೇ ಕಾರಣಕ್ಕೂ ಸಾಗಾಟ ಮಾಡಬಾರದು.
- ಆಟೋಗಳನ್ನು ಯಾವುದೇ ಕಾರಣಕ್ಕೂ ಮಾರ್ಪಡಿಸುವಂತಿಲ್ಲ. ಒಂದುವೇಳೆ ಮಾರ್ಪಡಿಸಿರುವುದು ಕಂಡುಬಂದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
- ಪ್ರಯಾಣಿಕರ ಆಟೋಗಳಲ್ಲಿ ಯಾವುದೇ ರೀತಿಯ ಸರುಕುಗಳನ್ನು ಸಾಗಾಟ ಮಾಡದಂತೆ ಎಚ್ಚರವಹಿಸಬೇಕು.
ಸಭೆಯಲ್ಲಿ ಪೂರ್ವ ಸಂಚಾರಿ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ, ನಗರದ ಆಟೋ ಚಾಲಕರು ಮತ್ತು ಮಾಲೀಕರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
MCC | ಏನಿದು ನೀತಿಸಂಹಿತೆ, ಏನೆಲ್ಲ ಮಾಡುವಂತಿಲ್ಲ, ಯಾವುದಕ್ಕೆ ವಿನಾಯಿತಿ ಇರಲಿದೆ?