ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಹೊಳೆಹೊನ್ನೂರು ರಸ್ತೆ ಲಕ್ಷ್ಮೀ ಸಾಮಿಲ್ ಹತ್ತಿರ ಯಾರೋ 3 ಜನರು ಬೈಕ್ ನಿಲ್ಲಿಸಿಕೊಂಡು ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಕೈಗೊಂಡು ಮೂವರನ್ನು ಬಂಧಿಸಲಾಗಿದೆ.
READ | ಮತ್ತೆ ಆಯನೂರು-ಈಶ್ವರಪ್ಪ ಟಕ್ಕರ್, ಟಿಕೆಟ್ ಬಗ್ಗೆ ಹೇಳಿದ್ದೇನು?
7,000 ರೂ.ಗಳ ಗಾಂಜಾ ಸೀಜ್
ಭದ್ರಾವತಿಯ ಸೀಗೆಬಾಗಿಯ ರೋಷನ್(27), ವೀರಾಪುರದ ಮೊಹಮ್ಮದ್ ಇಬ್ರಾಹಿಂ ಮೀರ ಅಲಿಯಾಸ್ ಟಕ್ಕರ್(24), ಭದ್ರಾ ಕಾಲೋನಿಯ ಮಂಜುನಾಥ್ ಅಲಿಯಾಸ್ ಕ್ಯಾತೆ(27) ಎಂಬುವವರನ್ನು ಬಂಧಿಸಲಾಗಿದೆ. ಅವರ ಬಳಿಯಿಂದ ಅಂದಾಜು ಮೌಲ್ಯ 7,000 ರೂ.ಗಳ ಒಟ್ಟು 195 ಗ್ರಾಂ ಒಣ ಗಾಂಜಾ, 690 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಭದ್ರಾವತಿ ಹಳೆನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿ ಉಪ ವಿಭಾಗದ ಹಿರಿಯ ಸಹಾಯಕ ಪೆÇಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮಾರ್ಗದರ್ಶನದಲ್ಲಿ ಹಳೇನಗರ ಠಾಣೆಯ ಪಿಎಸ್.ಐ ಶರಣಪ್ಪ ನೇತೃತ್ವದಲ್ಲಿ ಸಿಬ್ಬಂದಿಯನ್ನು ಒಳಗೊಂಡ ತಂಡವು ಕಾರ್ಯಾಚರಣೆ ಕೈಗೊಂಡಿದೆ.