ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಯಾಣಿಕನೊಬ್ಬ ಆಟೋದಲ್ಲೇ ಬ್ಯಾಗ್ ಬಿಟ್ಟು ಹೋಗಿದ್ದು, ಅದನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಕರ್ತವ್ಯ ಪ್ರಜ್ಞೆ ಮೆರೆದ ಆಟೋ ಚಾಲಕನಿಗೆ ಪೊಲೀಸರು ಸನ್ಮಾನಿಸಿದ್ದಾರೆ. ಆಟೋಚಾಲಕ ಫೈರೋಜ್ ಬ್ಯಾಗ್ ಮರಳಿಸುವ ಮೂಲಕ ಪ್ರಾಮಾಣಿಕತೆ ತೋರಿದ್ದಾರೆ.
READ | ರೈತನ ಮೇಲೆ ಕರಡಿ ದಿಢೀರ್ ದಾಳಿ, ತೀವ್ರ ಗಾಯ
ಭಾನುವಾರ ಬಸವೇಶ್ವರ ನಗರ ನಿವಾಸಿ ಶ್ರೀನಿವಾ್ ಗೌಡ ಅವರ ಕಾರು ಶರಾವತಿ ನಗರದ ಬಳಿ ಕೆಟ್ಟುನಿಂತಿದೆ. ಆಗ ಅವರು ಆಟೋದಲ್ಲಿ ಮನೆಗೆ ಹೋಗಲು ಹೋದಾಗ, ಆಟೋದ ಚಾಲಕನು ಕಾರ್ ಅನ್ನು ತಳ್ಳಿ ಸ್ಟಾರ್ಟ್ ಮಾಡಿಕೊಟ್ಟಿರುತ್ತಾರೆ. ಈ ಸಮಯದಲ್ಲಿ ಶ್ರೀನಿವಾಸ ಗೌಡ ಅವರು ನಗದು ಹಣ, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಅಡಿಕೆ ಮಂಡಿಯ ಕೀ ಇದ್ದ ತಮ್ಮ ಬ್ಯಾಗ್ ಅನ್ನು ಮರೆತು ಆಟೋದಲ್ಲಿಯೇ ಬಿಟ್ಟು ಹೋಗಿರುತ್ತಾರೆ.
ಆಟೋಚಾಲಕನ ಕರ್ತವ್ಯ ಪ್ರಜ್ಞೆ
ಆಟೋದಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಚಾಲಕನು ಬ್ಯಾಗ್ ಅನ್ನು ಮರಳಿ ಪೊಲೀಸ್ ರಿಗೆ ತಂದು ಕೊಟ್ಟಿದ್ದಾನೆ. ಬ್ಯಾಗ್ ಮತ್ತು ಅದರಲ್ಲಿದ್ದ ₹22,000 ನಗದು, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಅಡಿಕೆ ಮಂಡಿಯ ಕೀ ಅನ್ನು ಮಾಲೀಕರಾದ ಶ್ರೀನಿವಾಸ್ ಗೌಡ ಅವರಿಗೆ ಹಿಂದಿರುಗಿಸಲಾಗಿಸಲಾಗಿದೆ.
ಆಟೋ ಚಾಲಕನಿಗೆ ಪ್ರಶಂಸಾ ಪತ್ರ
ಬ್ಯಾಗ್ ಹಾಗೂ ಅದರಲ್ಲಿದ್ದ ಹಣ ಮತ್ತು ವಸ್ತುಗಳನ್ನು ಹಿಂದಿರುಗಿಸಿ ಪ್ರಾಮಾಣಿಕತೆ ತೋರಿದ ಫೈರೋಜ್ ಖಾನ್ ಅವರ ಉತ್ತಮವ ಕಾರ್ಯಕ್ಕೆ ಮೆಚ್ಚಿ ಸೋಮವಾರ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪೂರ್ವ ವಲಯದ ಡಿಐಜಿಪಿ ತ್ಯಾಗರಾಜನ್, ಎಸ್.ಪಿ. ಮಿಥುನ್ ಕುಮಾರ್ ಮತ್ತಿತರರು ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಆಟೋ ಚಾಲಕ ಮಹಮ್ಮದ್ ಗೌಸ್ ಪ್ರಾಮಾಣಿಕತೆಗೆ ಖಾಕಿ ಶಹಭಾಷ್’ಗಿರಿ, ನಡೆದಿದ್ದೇನು?