ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೊಮ್ಮನಕಟ್ಟೆಯಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ.
READ | ಮಗಳ ಬರ್ತ್ ಡೇಗೆ ಸುತ್ತೋಲೆ ಹೊರಡಿಸಿ ಪೇಚಿಗೆ ಸಿಲುಕಿದ ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ
ಬೊಮ್ಮನಕಟ್ಟೆಯ ಲಕ್ಷ್ಮೀಬಾಯಿ(28) ಸಿಡಿಲು ಬಡಿದು ಮೃತಪಟ್ಟ ಮಹಿಳೆ. ನಗರದಲ್ಲಿ ಸಂಜೆಯಿಂದಲೇ ಗುಡುಗು, ಮಿಂಚಿನ ಆರ್ಭಟ ಅಧಿಕವಾಗಿದ್ದು, ಮಹಿಳೆಯು ಕುರಿಗಳಿಗೆ ಮೇವು ತರುವುದಕ್ಕೆಂದು ಹೋಗಿದ್ದಾರೆ. ಆಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿನೋಬನಗರ ಪಿ.ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.