ಸಿಗಂದೂರು ಮೇಲುಸ್ತುವಾರಿ ಸಮಿತಿ ರದ್ದತಿಗೆ 15 ದಿನಗಳ ಡೆಡ್’ಲೈನ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಿಗಂದೂರು ದೇವಸ್ಥಾನಕ್ಕೆ ನೇಮಕ ಮಾಡಿರುವ ಸಮಿತಿ ರಚನೆ ವಿರೋದಿಸಿ ಖಂಡನಾ ನಿರ್ಣಯ ಕೈಗೊಳ್ಳಲಾಗಿದ್ದು, 15 ದಿನಗಳೊಳಗೆ ಸಮಿತಿ ರದ್ದುಗೊಳಿಸಲು ಗಡುವು ನೀಡಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿದ ಜಿಲ್ಲಾ ಆರ್ಯ ಈಡಿಗರ ಸಂಘವು ವಿವಿಧ ಸಮುದಾಯಗಳ ಮುಖಂಡರ ನಿಯೋಗ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿತು.
ಸರ್ಕಾರ ದುರುದ್ದೇಶ ಮತ್ತು ಸ್ವ ಹಿತಾಸಕ್ತಿಯಿಂದ ಕೂಡಿದ ದೂರಿನ ಅನ್ವಯ ತರಾತುರಿಯಲ್ಲಿ ಸಾಗರ ಉಪ ವಿಭಾಗಾದಿಕಾರಿಗಳಿಂದ ಏಕ ಪಕ್ಷೀಯ ವರದಿ ತರಿಸಿಕೊಂಡು ನಿಯಮ ಬಾಹಿರವಾಗಿ ಸಮಿತಿ ರಚನೆ ಮಾಡಿದೆ ಎಂದು ನಿಯೋಗ ಆರೋಪಿಸಿತು.
ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಜಿ.ಡಿಮಂಜುನಾಥ್, ಎನ್. ಮಂಜುನಾಥ್, ಆರ್.ಮೋಹನ್, ಎನ್.ರಮೇಶ್, ಪ್ರವೀಣ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!