ಕಂಪ್ಲೀಟ್ ರಿಪೋರ್ಟ್: ಹೂವಿನ ಮಾರ್ಕೆಟ್ ಸ್ಥಳಾಂತರ, ಏಕೆ, ಎಲ್ಲಿ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಈಗಿರುವ ಶಿವಪ್ಪ ನಾಯಕ ಹೂವಿನ ಮಾರ್ಕೆಟ್ ಅನ್ನು ಖಾಸಗಿ ಬಸ್ ನಿಲ್ದಾಣದ ದ್ವಿಚಕ್ರ ವಾಹನ ಪಾರ್ಕಿಂಗ್ ಜಾಗದ ಸಮೀಪದ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಮಹಾನಗರ ಪಾಲಿಕೆ ಆಯುಕ್ತ ಮತ್ತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ್ ವಟಾರೆ ನಿರ್ದೇಶನ ಕೂಡ ನೀಡಿದ್ದಾರೆ.
ಕಾರಣ: ಹೂವಿನ ಮಾರ್ಕೆಟ್ ಜಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ (ಎಂ.ಎಲ್.ಸಿ.ಪಿ) ಸೌಲಭ್ಯ ಕಲ್ಪಿಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಒಟ್ಟು 150 ಕಾರುಗಳನ್ನು ನಿಲುಗಡೆ ಮಾಡಲು ಸಾಮರ್ಥ್ಯವಿರುವ ಕಟ್ಟಡ ಇಲ್ಲಿ ನಿರ್ಮಿಸುವ ಯೋಜನೆ ಇದೆ. ಹೀಗಾಗಿ, ತಾತ್ಕಾಲಿಕವಾಗಿ ಹೂವಿನ ಮಾರ್ಕೆಟ್ ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದೆ. ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ 11 ತಿಂಗಳ ಕಾಲಾವಧಿ ನೀಡಿದ್ದು, ಕಟ್ಟಡ ಸಿದ್ಧವಾದ ನಂತರ ನೆಲಮಹಡಿಯಲ್ಲಿ ಹೂವಿನ ಅಂಗಡಿಗಳಿಗಾಗಿ 118 ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!