ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮುಂಬರುವ ವಿಧಾನಸಭೆ ಚುನಾವಣೆ (assembly election)ಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆಯುವುದಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸಿದೆ ಎಂದು ಬಿಜೆಪಿ ವಿಭಾಗ ಪ್ರಭಾರ ಗಿರೀಶ್ ಪಟೇಲ್ ಹೇಳಿದರು.
ಬೂತ್ ವಿಜಯ್ ಅಭಿಯಾನದಲ್ಲಿ ಮಾತನಾಡಿದ ಅವರು, ಚುನಾವಣೆಗಳಿಗೆ ಬೂತ್ ಸಮಿತಿ ಒಂದು ಅಡಿಗಲ್ಲು ಇದ್ದಂತೆ. ರಾಜ್ಯದ 52 ಕ್ಷೇತ್ರಗಳಲ್ಲಿ ಬಿಜೆಪಿ ಇದುವರೆಗೆ ಗೆಲುವು ಸಾಧಿಸಿಲ್ಲ ಎಂದರು.
READ |ಎಂಟು ಮನೆಗಳ್ಳತನ ಪ್ರಕರಣಗಳನ್ನು ಬೇಧಿಸಿದ ಖಾಕಿ ಪಡೆ
ಈ ಹಿಂದೆ ರಾಜ್ಯದಲ್ಲಿ ಬಿಜೆಪಿಗೆ ಶೇ.16 ಮತಗಳಿದ್ದವು. ಈಗ ಶೇ.36ಕ್ಕೆ ಏರಿಕೆಯಾಗಿದೆ. ಕನಿಷ್ಠ ಶೇ.50ರಷ್ಟು ಮತದಾರರನ್ನು ಸೆಳೆಯುವುದು ಬಿಜೆಪಿಯ ಉದ್ದೇಶವಾಗಿದೆ. ಇದಕ್ಕಾಗಿ ಜಿಲ್ಲೆಯ 299 ಬೂತ್ನಲ್ಲಿ ಪೇಜ್ ಪ್ರಮುಖರಿದ್ದಾರೆ.
- ಪ್ರತಿ ಬೂತ್ನಲ್ಲಿ ವಾಟ್ಸ್ ಆ್ಯಪ್ ಗ್ರೂಪ್ ಮಾಡಿ ಮತದಾರರನ್ನು ಸಂಪರ್ಕಿಸಲಾಗುತ್ತಿದೆ.
- ಕಾರ್ಯಕರ್ತರನ್ನು ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
- ಕೀ ವೋಟರ್ಸ್ ಮನೆಯ ಮೇಲೆ ಬಿಜೆಪಿಯ ಧ್ವಜ ಹಾಕುವ ಕೆಲಸ ಆಗುತ್ತಿದೆ
- ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಮೂಲಕ ದೇಶದ ಜನ ಸಾಮಾನ್ಯರನ್ನು ಪ್ರತಿ ತಿಂಗಳ ಕೊನೆಯ ಭಾನುವಾರ ಸಂಪರ್ಕಿಸುತ್ತಿದ್ದಾರೆ.
- ಎಲೆಮರೆಯ ವ್ಯಕ್ತಿಗಳನ್ನು ಗುರುತಿಸಿ ದೇಶಕ್ಕೆ ಪರಿಚಯಿಸುವ ಕೆಲಸವನ್ನು ಪ್ರಧಾನಿಯವರು ಮಾಡುತ್ತಿದ್ದು, ಜನ ಸಾಮಾನ್ಯರ ಹೃದಯಲ್ಲೂ ಕೂಡ ಪ್ರಧಾನಿ ಸ್ಥಾನ ಗಳಿಸಿದ್ದಾರೆ.
ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ
ಮಲ್ಲೇಶ್ವರ ನಗರದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೂರ್ಣ ಬಹುಮತಕ್ಕಾಗಿ ಬೂತ್ ವಿಜಯ್ ಅಭಿಯಾನ ಕೈಗೊಂಡಿದ್ದೇವೆ. ಪಕ್ಷದ ವಿಚಾರ ಧಾರೆ, ಸಿದ್ಧಾಂತ, ಅಭಿವೃದ್ಧಿ ಹಾಗೂ ನಾಯಕತ್ವ ಈ ವಿಚಾರಗಳ ಬಗ್ಗೆ ಪಕ್ಷ ಗಮನಹರಿಸಿದೆ ಎಂದರು.
162ನೇ ಬೂತ್ ಅಧ್ಯಕ್ಷ ಮಾರುತಿ, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಸೂಡಾ ಅಧ್ಯಕ್ಷ ನಾಗರಾಜ್, ಬಿಜೆಪಿ ಕಾರ್ಯದರ್ಶಿ ಮೋಹನ್ ರೆಡ್ಡಿ ಮತ್ತಿತರರಿದ್ದರು.
https://suddikanaja.com/2023/01/02/date-fix-for-releasing-of-vaisampayana-theera-movie/