ಸುದ್ದಿ ಕಣಜ.ಕಾಂ ಹೊಸನಗರ
HOSANAGARA: ಮಲೆನಾಡಿನಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ತಾಲೂಕಿನ ಅರಸಾಳು ಹತ್ತಿರ ರೈಲ್ವೆ ಹಳಿಯ ಮೇಲೆ ಶುಕ್ರವಾರ ರಾತ್ರಿ ಮರ ಬಿದ್ದಿದೆ. ಈ ವೇಳೆ ವಿದ್ಯುತ್ ಲೈನ್ ಕಡಿತಗೊಂಡಿದೆ. ಈ ಕಾರಣದಿಂದಾಗಿ ಬೆಂಗಳೂರಿನಿಂದ ಹೊರಟ ಇಂಟರ್ ಸಿಟಿ ರೈಲು ಅರಸಾಳು ಬಳಿ ನಿಂತಿದೆ.
ರೈಲು ಬೆಂಗಳೂರಿನಿಂದ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಿವಮೊಗ್ಗಕ್ಕೆ ಹೊರಟಿದೆ. ರಾತ್ರಿ 9.23ಕ್ಕೆ ಅರಸಾಳು ನಿಲ್ದಾಣಕ್ಕೆ ತಲುಪಿದ್ದು ಅಲ್ಲಿಯೇ ನಿಂತಿದೆ.
ರೈಲ್ವೆ ಅಧಿಕಾರಿ ಇದಕ್ಕೆ ಪ್ರತಿಕ್ರಿಯಿಸಿದ್ದು, “ವಿದ್ಯುತ್ ಲೈನ್ ಕಡಿತಗೊಂಡಿರುವುದಾಗಿ ತಿಳಿದುಬಂದಿದೆ. ಸಿಬ್ಬಂದಿ ಭೇಟಿ ನೀಡಿ ಅದನ್ನು ರಿಪೇರಿ ಮಾಡಲಿದ್ದಾರೆ. ಜತೆಗೆ, ಬಳಿ ಮೇಲೆ ಬಿದ್ದಿರುವ ಮರವನ್ನೂ ತೆರೆವುಗೊಳಿಸಲಾಗುವುದು” ಎಂದು ತಿಳಿಸಿದ್ದಾರೆ.
READ | ಹೆದ್ದಾರಿಯಲ್ಲಿ ಬಿದ್ದ ಮರ, ನಾಲ್ಕು ಗಂಟೆ ಟ್ರಾಫಿಕ್ ಜಾಮ್